ಮುಂಡಾಜೆ-ಧರ್ಮಸ್ಥಳ ರಸ್ತೆ ಸಮಸ್ಯೆ- ಜಿಲ್ಲಾಧಿಕಾರಿಗಳ ಆದೇಶವಿದ್ದರೂ ರಸ್ತೆ ಸಂಚಾರಕ್ಕೆ ನಿರ್ಬಂಧಿಸದ ಹಿನ್ನಲೆ: ಸುದ್ದಿ ವರದಿ ಬೆನ್ನಲ್ಲೇ ರಾತ್ರಿ ಬ್ಯಾರಿಕೇಡ್ ಅಳವಡಿಕೆ

0

ಮುಂಡಾಜೆ: ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ‌ ಮೋರಿಗಳು ಕುಸಿದಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಿದ್ದರು. ಆದರೆ ಜಿಲ್ಲಾಧಿಕಾರಿಗಳ‌ ಆದೇಶಕ್ಕೆ ಅಧಿಕಾರಿಗಳು ಕಿಮ್ಮತ್ತು ನೀಡದೇ, ಮುಂಡಾಜೆಯಲ್ಲಿ ಯಾವುದೇ ಬ್ಯಾರಿಕೇಡ್ ಅಳವಡಿಕೆ ಗುರುವಾರ ರಾತ್ರಿಯ ತನಕವೂ ಆಗಿರಲಿಲ್ಲ. ಈ ಬಗ್ಗೆ ಸುದ್ದಿ ನ್ಯೂಸ್ ಮಾಡಿದ ವರದಿ ರಾತ್ರಿ ಪ್ರಸಾರವಾದ ಬೆನ್ನಲ್ಲೇ ಅಧಿಕಾರಿಗಳು ಬಂದು ಬ್ಯಾರಿಕೇಡ್ ಇಟ್ಟು ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಸುದ್ದಿ ವರದಿಯ ಬೆನ್ನಲ್ಲೇ ಕ್ರಮ ಆಗಿರುವ ಕುರಿತು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://youtu.be/szU4OzKq6wE

LEAVE A REPLY

Please enter your comment!
Please enter your name here