ಮಡಂತ್ಯಾರು: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆ

0

ಮಡಂತ್ಯಾರು: ಮಡಂತ್ಯಾರು ವಲಯದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆಯನ್ನು ಬಸವನಗುಡಿ ವಿಶ್ವಕರ್ಮ ಸಭಾಭವನದಲ್ಲಿ ನಡೆಸಲಾಯಿತು.ಈ ಕಾರ್ಯಕ್ರಮವನ್ನು ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ್ ಸಾಲ್ಯಾನ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ಭಜನಾ ಪರಿಷತ್ ವಲಯ ಸಂಯೋಜಕರಾದ ಪ್ರವೀಣ್ ಹೆಗ್ಡೆ, ವಲಯ ಮೇಲ್ವಿಚಾರಕ ವಸಂತ ಕುಮಾರ್ ಸ್ವಾಗತಿಸಿದರು.

ಬಸವನಗುಡಿ ವಿಭಾಗದ ಸೇವಾಪ್ರತಿನಿಧಿ ಭಾರತಿ ಧನ್ಯವಾದಿಸಿದರು.

ಎಲ್ಲಾ ಭಜನಾ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗು ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಭಾಗವಹಿಸಿದರು.

ಈ ಸಭೆಯಲ್ಲಿ ವಲಯ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಂದಿಪು ಕುತ್ತಿನ, ಉಪಾಧ್ಯಕ್ಷರಾಗಿ ಕಿಶೋರ್ ಮಂಜರ ಪಾಲ್ಕೆ, ಕಾರ್ಯದಶಿಯಾಗಿ ಪ್ರವೀಣ್ ಹೆಗ್ಡೆ ಪಾರೆಂಕಿ, ಜೊತೆ ಕಾರ್ಯದಶಿಯಾಗಿ ಪ್ರವೀಣ್ ಶೆಟ್ಟಿ ಮಾಲಾಡಿ, ಕೋಶಧಿಕಾರಿಯಾಗಿ ರಾಜಾರಾಮ್ ಪುರಿಯ ಆಯ್ಕೆಯಾದರು.

LEAVE A REPLY

Please enter your comment!
Please enter your name here