ಗುರುವಾಯನಕೆರೆ: ಎಕ್ಸೆಲ್ ಪ.ಪೂ ಕಾಲೇಜಿನ ವಾಣಿಜ್ಯ ವಿಭಾಗದ ಮಕ್ಕಳಿಂದ ಶೈಕ್ಷಣಿಕ ಭೇಟಿ ಕಾರ್ಯಕ್ರಮ

0

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮಕ್ಕಳಿಗೆ ತುಳು ನಾಡಿನ ಸಂಸ್ಕೃತಿ ಸೊಬಗನ್ನು ತಿಳಿಯಪಡಿಸುವ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಲಾಯಿತು.ತುಳುವ ಇತಿಹಾಸ, ಸಂಸ್ಕೃತಿ ಮತ್ತು ಜಾನಪದ ಅಧ್ಯಯನಕ್ಕಾಗಿ ಚಾರಿಟಬಲ್ ಟ್ರಸ್ಟ್ ಆಗಿ ನೋಂದಾಯಿಸಲ್ಪಟ್ಟ ಪ್ರಸಿದ್ಧ ಸ್ವಯಂಸೇವಾ ಸಂಸ್ಥೆಯಾಗಿದೆ.

1995ರಲ್ಲಿ ಖ್ಯಾತ ಇತಿಹಾಸಕಾರ ಮತ್ತು ಮ್ಯೂಸಿಯಾಲಜಿಸ್ಟ್ ಡಾ.ತುಕಾರಾಂ ಪೂಜಾರಿ ಅವರಿಂದ ಸ್ಥಾಪಿಸಲ್ಪಟ್ಟ ಕೇಂದ್ರವು ಈಗ ತುಳುವ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಭಂಡಾರವಾಗಿ ಬೆಳೆದಿದೆ. ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಮತ್ತು ಪರಂಪರೆಯ ಉತ್ಸಾಹಿಗಳಿಗೆ ಅಧ್ಯಯನ ಕೇಂದ್ರವಾಗಿ ಉಳಿದುಕೊಂಡಿದ್ದು, ಎಕ್ಸೆಲ್ ನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಂಪರೆಯ ಪ್ರವಾಸಗಳು, ಪ್ರಾತ್ಯಕ್ಷಿಕೆಗಳು, ಪ್ರದರ್ಶನಗಳು, ಸ್ಪರ್ಧೆಗಳ ಜೊತೆಗೆ ತುಳು ಪ್ರಕಟಣೆಗಳು, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತಾದ ಮಾಹಿತಿ ಪಡೆದುಕೊಂಡರು. ಕರ್ನಾಟಕದ ಹಲವು ಭಾಗಗಳಿಂದ ಎಕ್ಸೆಲ್ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ತಾವು ವಿದ್ಯಾರ್ಜನೆ ಮಾಡುತ್ತಿರುವ ನೆಲದ ಸಂಸ್ಕೃತಿಯ ಪರಿಚಯವಾಗಬೇಕು, ಇದರೊಂದಿಗೆ ತುಳುವ ನಾಡಿನ ಪರಂಪರೆಯ ಅಧ್ಯಯನವಾಗಬೇಕೆಂಬುದು ಈ ಶೈಕ್ಷಣಿಕ ಭೇಟಿ ಕಾರ್ಯಕ್ರಮದ ಸದುದ್ದೇಶವಾಗಿದೆ.

ಸಂಸ್ಥೆಯ ಸದಾ ಕ್ರಿಯಾಶೀಲರಾಗಿ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಿರುವ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು, ಈ ಕೇಂದ್ರವು ತುಳುನಾಡಿನ ಸೊಬಗನ್ನು ಮೆರೆಯುವ, ತಿಳಿಯುವ ವಸ್ತು ಸಂಗ್ರಹಾಲಯ ಮಾತ್ರವಲ್ಲದೇ, ಅನೇಕ ಚಟುವಟಿಕೆಗಳ ಸಂಗ್ರಹಗಳ ಮೂಲಕ ಯಶಸ್ವಿಯಾಗಿ ತನ್ನ ಛಾಪು ಮೂಡಿಸಿದೆ ಮತ್ತು ನಮ್ಮ ಪರಂಪರೆಯ ಹಿಂದಿನದನ್ನು ಅರ್ಥೈಸುವ ಮಾರ್ಗವನ್ನು ತೋರಿಸಿದೆ ಎಂದು ಅಭಿನಂದಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ, ಇಂಜಿನಿಯರಿಂಗ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಜಾಗೃತಿಗೆ ಯಶಸ್ವಿಯಾಗಿ ಕಾಲಿಟ್ಟಿರುವ ಅಧ್ಯಯನ ಕೇಂದ್ರವೆಂಬುದು ಅತ್ಯಂತ ಹೆಮ್ಮೆಯ ಸಂಗತಿ. ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಸಕಾರಾತ್ಮಕವಾಗಿ ಸೇತುವೆ ಮಾಡುವಲ್ಲಿ ಜನರನ್ನು ತಲುಪಲು ಶ್ರಮಿಸಿದೆ. ಈ ಪ್ರಯಾಣವನ್ನು ಮತ್ತಷ್ಟು ಘಟನಾತ್ಮಕವಾಗಿಸಲು ಕೇಂದ್ರವು ತುಳುವ ಸಂಸ್ಕೃತಿ ಮತ್ತು ಪರಂಪರೆಯ ಪ್ರಚಾರದಲ್ಲಿ ದೃಢವಾದ ಘಟನೆಗಳ ಸರಣಿಯನ್ನು ಸ್ವೀಕರಿಸಿದೆ ಎಂದು ಅಭಿಪ್ರಾಯ ಪಟ್ಟರು.

ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಹಾಗೂ ವಿಭಾಗ ಮುಖ್ಯಸ್ಥ ಪ್ರಸನ್ನ, ಪ್ರಾಧ್ಯಾಪಕ ರವಿ ಮತ್ತು ಆಂಗ್ಲಭಾಷಾ ಪ್ರಾಧ್ಯಾಪಕಿ ಅರ್ಪಿತಾ ಎಂ ಇವರು ಶೈಕ್ಷಣಿಕ ಭೇಟಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡರು.

LEAVE A REPLY

Please enter your comment!
Please enter your name here