![](https://belthangady.suddinews.com/wp-content/uploads/2024/07/15.jpg)
ಬೆಳ್ತಂಗಡಿ: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿರುವ ಗುರುವಾಯನಕೆರೆ ಸಮೀಪದ ಕುಲಾಲ ಮಂದಿರದ ಮುಂಭಾಗದಲ್ಲಿದ್ದ ಹೊಂಡವನ್ನು ಸ್ಥಳೀಯರಾದ ಮೋಹನಂದ ಕುಲಾಲ್ ಮತ್ತು ಸತೀಶ್ ಕುಲಾಲ್ ಅವರು ಮುಚ್ಚುವ ಮೂಲಕ ಮಾದರಿಯಾಗಿದ್ದಾರೆ.
ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದರಿಂದ ಪದೇ ಪದೇ ಅಪಘಾತ ಸಂಭವಿಸುತ್ತಿತ್ತು.
ಇದನ್ನು ಮನಗಂಡ ಮೋಹನಂದ ಕುಲಾಲ್ ಮತ್ತು ಸತೀಶ್ ಕುಲಾಲ್ ಅವರು ಹೊಂಡ ಮುಚ್ಚಿ ಸಾಮಾಜಿಕ ಕಾಳಜಿ ತೋರಿದ್ದಾರೆ.
ಇವರ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.