ಸುದ್ದಿ ಬಿಡುಗಡೆ ವರದಿಯ ಫಲಶ್ರುತಿ: ಬಳಂಜ ನಾಲ್ಕೂರಿನಲ್ಲಿ ವಿದ್ಯುತ್ ತಂತಿಗೆ ತಾಗುವ ಮರಗಳನ್ನು ತೆರವುಗೊಳಿಸಿದ ಮೆಸ್ಕಾಂ ಇಲಾಖೆ

0

ಬಳಂಜ: ವಿದ್ಯುತ್ ತಂತಿಗಳಿಗೆ ತಾಗಿಕೊಂಡಿದ್ದ ಮರಗಳನ್ನು ಅಳದಂಗಡಿ ವಿಭಾಗದ ಮೆಸ್ಕಾಂ ಇಲಾಖೆಯವರು ತೆರವುಗೊಳಿಸಿದ್ದಾರೆ.ಮೆಸ್ಕಾಂ ಅಧಿಕಾರಿಗಳ ಸ್ಪಂದನೆಗೆ ನಾಗರಿಕರ ಪರವಾಗಿ ಸಮಾಜ ಸೇವಕ ಕರುಣಾಕರ್ ಹೆಗ್ಡೆ‌ ಕೃತಜ್ಞತೆ ಸಲ್ಲಿಸಿದ್ದಾರೆ.

ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಸಣ್ಣ ಗಾಳಿ ಅಥವಾ ಮಳೆ ಬಂದರೂ ವಿದ್ಯುತ್ ಸಂಪರ್ಕ ಕಡಿತವಾಗುತ್ತಿತ್ತು. ಈ ಸಮಸ್ಯೆ ನಿರ್ಮಾಣವಾಗಲು ವಿದ್ಯುತ್ ತಂತಿಗೆ ಅಲ್ಲಲ್ಲಿ ಮರಗಳು ತಾಗಿಕೊಂಡಿರುವುದೇ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಕುರಿತು ಸುದ್ದಿ ಬಿಡುಗಡೆ ಪತ್ರಿಕೆ ನಾಲ್ಕೂರಿನಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆ ಎಂಬ ವರದಿ ಪ್ರಕಟಿಸಿತ್ತು.

LEAVE A REPLY

Please enter your comment!
Please enter your name here