ಶಿವಗಿರಿ-ನೆಕ್ಕರೆ ಸಂಪರ್ಕ ಕಲ್ಪಿಸುವ ಕಿಂಡಿ ಅಣೆಕಟ್ಟನ್ನು ದಾಟುವುದು ನಿಷೇಧ- ತಣ್ಣೀರುಪಂತ, ಕಣಿಯೂರು ಪಂಚಾಯತ್ ನಿಂದ ನಾಮಫಲಕ ಅಳವಡಿಕೆ

0

ಕರಾಯ: ಶಿವಗಿರಿ-ನೆಕ್ಕರೆ ಎಂಬಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲನ್ನು ಭಯಭೀತರನ್ನಾಗಿಸಿತ್ತು.

ತಣ್ಣೀರುಪಂತ ಹಾಗೂ ಉರುವಾಲು ಗ್ರಾಮ ಪಂಚಾಯತ್ ನವರು ನೆರೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ಕಿಂಡಿ ಅಣೆಕಟ್ಟುನ್ನು ದಾಟುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ನಾಮಫಲಕ ಅಳವಡಿಸಿದ್ದಾರೆ.

ಶಿವಗಿರಿ, ಕರಾಯ ಗ್ರಾಮಕ್ಕೆ ಒಳಪಡುತ್ತದೆ.ನೆಕ್ಕರೆ ಪ್ರದೇಶಕ್ಕೆ ಉರುವಾಲು ಗ್ರಾಮ ಒಳಪಡುತ್ತದೆ.ಘಟನಾ ಸ್ಥಳಕ್ಕೆ ಎರಡು ಗ್ರಾಮದ ಪಂಚಾಯತ್ ನವರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here