ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ಸಂಘಗಳ ಉದ್ಘಾಟನೆ

0

ಉಜಿರೆ: ವಿದ್ಯಾರ್ಥಿಗಳ ಅಂತಿಮ ಗುರಿ ಉತ್ತಮ ಫಲಿತಾಂಶವೇ ಆಗಿದ್ದರೂ, ಕೇವಲ ಕಲಿಕೆಯೊಂದೇ ಬದುಕು ಕಟ್ಟಿಕೊಡದು.ವಿದ್ಯಾರ್ಜನೆ ಜೊತೆ ಜೊತೆಗೆ ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣ ಬಹಳ ಅಗತ್ಯ. ಈ ಶಿಕ್ಷಣ ಸಂಸ್ಥೆ ನಿರ್ಮಿಸಿಕೊಡುವ ವ್ಯವಸ್ಥೆಗಳಲ್ಲಿ, ಸಿಗುವ ಸಂಪನ್ಮೂಲಗಳ ಸರಿಯಾದ ಬಳಕೆ ಮಾಡುವುದರ ಮೂಲಕ ನಿಮ್ಮ ಸರ್ವಾಂಗೀಣ ಅಭಿವೃದ್ಧಿ ಸಾಧ್ಯಾವಾಗಿಸಿಕೊಳ್ಳಿ. ಕಲಿಕೆ ಜೊತೆಗೆ ಇತರೆ ಪ್ರತಿಭೆಗಳಿದ್ದರೆ ಭವಿಷ್ಯದಲ್ಲಿ ಪ್ರಯೋಜನಕಾರಿ. ನಿಮ್ಮ ಆಸಕ್ತಿಯ ಸಂಘಗಳಲ್ಲಿ ಸೇರಿಕೊಂಡು ಸುಪ್ತ ಪ್ರತಿಭೆಗಳ ಅನಾವರಣಗೊಳಿಸಿ ಎಂದು ಉಜಿರೆ ಎಸ್.ಡಿ.ಎಂ.ವಸತಿ ಪ.ಪೂ. ಕಾಲೇಜಿನ ಈ ಶೈಕ್ಷಣಿಕ ವರ್ಷದ ‘ವಿವಿಧ ಸಂಘಗಳ ಉದ್ಘಾಟನೆ’ ನೆರವೇರಿಸಿ ಪದವಿ ಕಾಲೇಜಿನ ಆಡಳಿತ ಕುಲಸಚಿವೆ ಹಾಗೂ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾಗಿರುವ ಶಲಿಪ್ ಎ.ಪಿ. ಇವರು ಮಾತಾಡಿದರು.

ಪಾಂಡವರಿಗೆ ಶಸ್ತ್ರ-ಶಾಸ್ತ್ರಗಳ ಕಲಿಕೆಯ ಜೊತೆ ಜೊತೆಗೆ ಅವರ ಸ್ವಂತ ಆಸಕ್ತಿಯ ವಿಷಯಗಳ ಕಲಿಕೆಗೂ ಒತ್ತು ನೀಡಿ ಕಡ್ಡಾಯ ಕಲಿಕೆ ಎಂದು ನಿಗದಿಗೊಳಿಸಿ ಸನ್ನದ್ಧಗೊಳಿಸಿದ ವಿದ್ಯೆಗಳು ಅಜ್ಞಾತವಾಸದ ವೇಳೆ ಪಾಂಡವರ ಕಾಪಾಡಿತು.ಹಾಗೆಯೇ ಐದ್ಯೋಗಿಕ ನೆಲೆಯಲ್ಲಿ ಮಾತ್ರವಲ್ಲದೇ, ಮಾನಸಿಕ ನೆಮ್ಮದಿ ಹಾಗೂ ಕುಷಿಗೆ ಪೂರಕವಾದ ಕಲಿಕೆಗೆ, ಪ್ರತಿಭಾ ಪ್ರದರ್ಶನಗಳಿಗೆ ಸಂಘದ ಕಾರ್ಯ ಚಟುವಟಿಕೆ ಸಹಕಾರಿ. ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಹೇಳಿದರು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಮನೀಶ್ ಕುಮಾರ್ ಹಾಗೂ ವಿಜ್ಞಾನ ಸಂಘದ ಸಂಯೋಜಕರು ಹಾಗೂ ಭೌತಶಾಸ್ತ್ರ ಮುಖ್ಯಸ್ಥ ರಮೇಶ್ ಬಾಬು ಎಚ್.ಪಿ ಉಪಸ್ಥಿತರಿದ್ದರು.

ಇಂಗ್ಲಿಷ್ ವಿಭಾಗದ ಉಪನ್ಯಾಸಕ ಪಾರ್ಶ್ವನಾಥ ಹೆಗ್ಡೆ ವಂದಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here