ಉರುವಾಲು ಕೊರಿಂಜ ನಿವಾಸಿ ಲಾರಿ ಚಾಲಕ ಇಕ್ಬಾಲ್ ಚೆನ್ನಪಟ್ಟಣದಲ್ಲಿ ನಿಧನ

0

ಉರುವಾಲು: ಕೊರಿಂಜ ನಿವಾಸಿ ದಿವಂಗತ ಯೂಸುಫ್ ರವರ ಪುತ್ರ ಇಕ್ಬಾಲ್ (35ವರ್ಷ) ರವರು ಜೂ 23ರಂದು ಮಂಡ್ಯ ಜಿಲ್ಲೆಯ ಚೆನ್ನಪಟ್ಟಣದಲ್ಲಿ ನಿಧನರಾದ ಘಟನೆ ತಿಳಿದು ಬಂದಿದೆ.

ಇವರು ಲಾರಿ ಚಾಲಕರಾಗಿ ಕೆಲಸ ನಡೆಸುತ್ತಿದ್ದರು. ಜೂ 23ರಂದು ಲಾರಿ ನಿಲ್ಲಿಸಿ ಲಾರಿಯಲ್ಲಿಯೇ ಮಲಗಿದ್ದವರು ಮಲಗಿದಲ್ಲಿಯೇ ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತಾಯಿ, ಪತ್ನಿ, ಮಗು, ಓರ್ವ ಸಹೋದರ, ಓರ್ವ ಸಹೋದರಿ ಮತ್ತು ಬಂದು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here