ಪದ್ಮುಂಜ: ಕೆ. ವಸಂತ ಬಂಗೇರರಿಗೆ ಶ್ರದ್ಧಾಂಜಲಿ ಸಭೆ

0

ಪದ್ಮುಂಜ: ಇಲ್ಲಿಯ ಕಾಂಗ್ರೆಸ್ ಬೂತ್ ಸಮಿತಿ ವತಿಯಿಂದ ದಿವಂಗತ ವಸಂತ ಬಂಗೇರರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಬಂಗೇರರು ಓರ್ವ ವಿಶ್ವಸ್ತ ನಾಯಕ ಅವರು ಒಂದು ಮಾತು ಕೊಟ್ರೆ ಸಾಕು ಮತ್ತೆ ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ.

ಆ ಕೆಲಸ ಆಯಿತೆಂದು ನಂಬಬಹುದು ಅಷ್ಟೊಂದು ನೇರ ನಡೆ ನುಡಿಯ ಓರ್ವ ನಾಯಕರಾಗಿದ್ದರು ಅವರು ಯಾವತ್ತೂ ನ್ಯಾಯ ನೋಡುತ್ತಿದ್ದರೇ ಹೊರತು ಪಕ್ಷ ನೋಡಿ ಕೆಲಸ ಮಾಡಿದವರಲ್ಲ ಅವರ ನಿಧನದಿಂದ ಇಡೀ ತಾಲೋಕೆ ಅನಾಥವಾಗಿದೆ ಎಂದು ಸೇರಿದ ಅಭಿಮಾನಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಬೆಳ್ತಂಗಡಿ ಬೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾದ ಮಾಯಿಲ್ತೋಡಿ ಈಶ್ವರ ಭಟ್, ಹಿರಿಯರಾದ ಚಂದಪ್ಪ ಪೂಜಾರಿ, ಕೇಶವ ಪೂಜಾರಿ ಅಡೆಂಜ, ಅಣ್ಣು ಸಾಧನ.ಸಿ ಎ ಬ್ಯಾಂಕ್ ನಿವೃತ್ತ ಅಧಿಕಾರಿ ತಿಮ್ಮಯ ಗೌಡ.ಪಂ ಸದಸ್ಯೆ ಸುಮತಿ ಶೆಟ್ಟಿ, ಬೂತ್ ಅಧ್ಯಕ್ಷ ಶೇಖರ ಶೆಟ್ಟಿ, ಸತೀಶ್ ರಾವ್, ರಮಾನಂದ ಪೂಜಾರಿ, ಅಬ್ದುಲ್ ರಹ್ಮಾನ್ ಉಪಸ್ತಿತರಿದ್ದರು.

ಕಾಸಿಂ ಪದ್ಮುಂಜ ರವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here