ಜೂ.3: ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಸ್ಥಳದ ಅನೀಶ್ ಡಿ.ಎಲ್ ರವರಿಗೆ ಬೆಳ್ತಂಗಡಿಯಲ್ಲಿ ತವರಿಗೆ ಸ್ವಾಗತ

0

ಬೆಳ್ತಂಗಡಿ: ಭಾರತೀಯ ಭೂಸೇನೆಯಲ್ಲಿ ರವರಿಗೆ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಸ್ಥಳದ ಅನೀಶ್ ಡಿ.ಎಲ್ ಅವರು ಜೂನ್ 3ರಂದು ತವರೂರಿಗೆ ಹಿಂತಿರುಗಲಿದ್ದಾರೆ.

ಜೂನ್ 3ರಂದು ಅಪರಾಹ್ನ 2.30ಕ್ಕೆ ಅವರು ಬೆಳ್ತಂಗಡಿಗೆ ಆಗಮಿಸಲಿದ್ದಾರೆ.

ಅವರಿಗೆ ಬೆಳ್ತಂಗಡಿಯಲ್ಲಿ ಕೆ.ಎಸ್.ಎಂ.ಸಿ ಎ ಧರ್ಮಸ್ಥಳ ವಲಯ ಸಮಿತಿಯ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಸ್ವಾಗತಿಸಿ ಧರ್ಮಸ್ಥಳದ ಅವರ ಮನೆಯವರೆಗೆ ವಾಹ ಜಾಥಾದಲ್ಲಿ ಕರೆದೊಯ್ಯಲಾಗುವುದು.

ಧರ್ಮಸ್ಥಳ‌ ನಿವಾಸಿ ಡಿ ಲಾಲಿ ಹಾಗೂ ಸಾರಮ್ಮ ದಂಪತಿಗಳ ಪುತ್ರನಾಗಿರುವ ಅನೀಶ್ ಡಿ.ಎಲ್. ಕಳೆದ 20 ವರ್ಷಗಳ ಕಾಲ ರಾಜಾಸ್ತಾನ್, ಮಣಿಪುರ, ಉತ್ತರಾಖಂಡ, ಉತ್ತರಪ್ರದೇಶ, ಕರ್ನಾಟಕ ಸೇರಿದಂತೆ ವಿವಿದೆಡೆ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here