ಬೆಳಾಲು: ಮಾಯ ಮಹೇಶ್ವರ ಭಜನಾ ಮಂಡಳಿ ವತಿಯಿಂದ ರಂಗಪೂಜೆ, ಮಕ್ಕಳ ತಂಡಕ್ಕೆ ಶಾಲಾ ಬ್ಯಾಗ್ ವಿತರಣೆ

0

ಬೆಳಾಲು: ಮಾಯ ಶ್ರೀ ಮಹೇಶ್ವರ ಭಜನಾ ಮಂಡಳಿ ವತಿಯಿಂದ ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ಮೇ 6ರಂದು ಶ್ರೀ ದೇವರಿಗೆ ರಂಗಪೂಜೆ, ಕುಣಿತ ಭಜನೆ, ಮಕ್ಕಳ ಭಜನಾ ತಂಡದ ಎಲ್ಲಾ ಸದಸ್ಯರಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ ನಡೆಯಿತು.

ಸಂಜೆ ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಮಕ್ಕಳ ತಂಡ, ಮಾಚಾರು ಬದನಾಜೆ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಮಕ್ಕಳ ತಂಡ ಮಾಚಾರು, ಕೊಯ್ಯೂರು ಶ್ರೀ ಪಂಚದುರ್ಗಪರಮೇಶ್ವರಿ ಭಜನಾ ಮಂಡಳಿ ಮಕ್ಕಳ ತಂಡ, ಬೆಳಾಲು ಮಾಯ ಶ್ರೀ ಮಾಯ ಮಹೇಶ್ವರ ಭಜನಾ ಮಕ್ಕಳ ತಂಡಗಳಿಂದ ಭಜನಾ ಸೇವೆ ನೆರವೇರಿತು.ಭಾಗವಹಿಸಿದ ಭಜನಾ ತಂಡದ ಮಕ್ಕಳಿಗೆ ಪುಸ್ತಕ, ಪೆನ್ನು, ಮಾಯ ಮಹೇಶ್ವರ ಮಕ್ಕಳ ಭಜನಾ ತಂಡಕ್ಕೆ ಮಾಯಾ ಮಹೇಶ್ವರ ಭಜನಾ ಮಂಡಳಿ ವತಿಯಿಂದ ಸ್ಕೂಲ್ ಬ್ಯಾಗ್ ಮತ್ತು ಕುಣಿತ ಭಜನಾ ತರಬೇತುದಾರ ಹರೀಶ್ ನೆರಿಯ ನೀಡಿರುವ ತಾಳವನ್ನು ಪ್ರತಿಯೊಬ್ಬ ಸದಸ್ಯರಿಗೆ ನೀಡಲಾಗುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ ಕುದ್ರಾಲು ವಹಿಸಿದ್ದರು.

ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್ ಕೊಯ್ಯೂರು, ಭಜನಾ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಕುಂಭ ಗೌಡ ಬರೆಮೇಲು, ಗಂಗಾಧರ ಸಾಲಿಯಾನ್ ಎಂಜಿರಿಗೆ, ಗೌರವ ಸಲಹೆಗಾರ ಜಾರಪ್ಪ ಪೂಜಾರಿ ಬೆಳಾಲು, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ ವಿತರಣೆ ಮಾಡಿ ಶುಭ ಕೋರಿದರು.

ಶಿಕ್ಷಕ ಮಹೇಶ್ ಪುಳಿತ್ತಡಿ ನಿರೂಪಿಸಿದರು.ವಿವಿಧ ಭಜನಾ ತಂಡದ ಸಂಚಾಲಕರು,ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳು, ಸದಸ್ಯರು ಊರವರು ಹಾಜರಿದ್ದರು.

LEAVE A REPLY

Please enter your comment!
Please enter your name here