ಗುರುವಾಯನಕೆರೆಯಲ್ಲಿ ಶ್ರೀ ಶಾಂತೀಶ್ವರ ಫ್ಯೂಯಲ್ ಉದ್ಘಾಟನೆ

0

ಗುರುವಾಯನಕೆರೆ: ಇಲ್ಲಿಯ ಶಕ್ತಿನಗರರದಲ್ಲಿ ಶ್ರೀ ಶಾಂತೀಶ್ವರ ಫ್ಯೂಯಲ್ ಎ.29ರಂದು ಉದ್ಘಾಟನೆಗೊಂಡಿತು. ನವಶಕ್ತಿ ರಾಜೇಶ್ ಶೆಟ್ಟಿ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.

ಗುರುವಾಯನಕೆರೆ ಜಿನೇಂದ್ರ ನಿಲಯ ಸುಮನಾಜಿ ಅಮ್ಮ ದೀಪ ಪ್ರಜ್ವಲನೆ ನೆರವೇರಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮೂಡಬಿದ್ರೆ, ಎಂ. ಆರ್. ಪಿ. ಎಲ್ ಸಂಸ್ಥೆಯ ಮಾರ್ಕೆಟಿಂಗ್ ಚೀಫ್ ರಿಜನಲ್ ಮೆನೇಜರ್ ಸ್ವಾಮಿ ಪ್ರಸಾದ್, ಗುರುವಾನಕೆರೆ ಎಕ್ಸೆಲ್ ಪಿ.ಯು ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ವಿಧ್ವತ್ ರೆಸಿಡೆನ್ಸಿಯಲ್ ಪಿ.ಯು. ಕಾಲೇಜು ಅಧ್ಯಕ್ಷ ಸುಭಾಶ್ಚ0ದ್ರ ಶೆಟ್ಟಿ,ಹಂಸಗಿರಿ ಶಿವದರ್ಶನ್ ಅಗ್ರೋ ಇಂಡಸ್ಟ್ರಿಸ್ ಪಾಲುದಾರ ವೆಂಕಟ್ರಾಯ ಮಲ್ಯ, ಧನಕೀರ್ತಿ ಭಂಗ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅನುದೀಪ್ ಜೈನ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಚಂದ್ರಹಾಸ ಬಳಂಜ ನಿರೂಪಿಸಿದರು.

LEAVE A REPLY

Please enter your comment!
Please enter your name here