ಸುದ್ದಿ ವರದಿ ಬೆನ್ನಲ್ಲೇ ‌ಗುರುವಾಯನಕೆರೆ ರಾಜೇಶ್ ಮನೆಗೆ ಶಾಸಕ ಭೇಟಿ: ಅನಾರೋಗ್ಯದ ಬಗ್ಗೆ ತಿಳಿದುಕೊಂಡ ಪೂಂಜ

0

ಗುರುವಾಯನಕೆರೆ: ಏಕಾಏಕಿ ಎರಡೂ ಕಿಡ್ನಿ ಫೇಲ್ಯೂರ್ ಗೆ ಒಳಗಾಗಿರುವ ಗುರುವಾಯನಕೆರೆ ಆಟೋ ಚಾಲಕ ರಾಜೇಶ್ ರವರ ಬಗ್ಗೆ ಸುದ್ದಿ ವರದಿ ಮಾಡಿದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜ ಅವರ ಮನೆಗೆ ಭೇಟಿ ನೀಡಿದ್ದಾರೆ.

ಗುರುವಾಯನಕೆರೆ ಶಕ್ತಿನಗರದಲ್ಲಿರುವ ರಾಜೇಶ್ ರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಧೈರ್ಯ ತುಂಬಿದರು.

ಈ ವೇಳೆ, ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ, ಕುವೆಟ್ಟು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here