ಮುಂಡಾಜೆ ಬಂಟರ ಗ್ರಾಮ ಸಮಿತಿ ಸಭೆ: ಸಂಚಾಲಕ ವಿಶ್ವನಾಥ ಶೆಟ್ಟಿ ರವರಿಗೆ ಗೌರವ ಸಮರ್ಪಣೆ

0

ಮುಂಡಾಜೆ: ಮುಂಡಾಜೆ ಗ್ರಾಮದ ಬಂಟರ ಗ್ರಾಮ ಸಮಿತಿಯ ಏಪ್ರಿಲ್ ತಿಂಗಳ ಸಭೆಯು ಪದ್ಮನಾಭ ಶೆಟ್ಟಿ ಅಗರಿ ರವರ ಮನೆಯಲ್ಲಿ ಜರುಗಿತು.

ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಗ್ರಾಮ ಸಮಿತಿಯ ಸಂಚಾಲಕ ವಿಶ್ವನಾಥ ಶೆಟ್ಟಿ ಮಂಡ್ರುಪಾಡಿ ಇವರನ್ನು ಬೆಳ್ತಂಗಡಿ ಬಂಟರ ಸಂಘದ ಕಾರ್ಯದರ್ಶಿ ಕುಂಟಿನಿ ಸಂಜೀವ ಶೆಟ್ಟಿ ಇವರು ಸನ್ಮಾನಿಸಿದರು.

ಬಳಿಕ ಮಾತನಾಡಿ ಗ್ರಾಮ ಸಮಿತಿಯ ಕಾರ್ಯಕ್ರಮಗಳನ್ನು ಮೆಚ್ಚಿದರು. ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ ಇವರು ವಿಶ್ವನಾಥ ಶೆಟ್ಟಿ ಅವರ ಸೇವೆಯನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಶೆಟ್ಟಿ ಅಗರಿ ಇವರು ವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮಧು ಶೆಟ್ಟಿ ಹುರ್ತಜೆ, ಭವಾನಿ ಶೆಟ್ಟಿ ಸೋಮಂತಡ್ಕ ಉಪಸ್ಥಿತರಿದ್ದರು. ಪದ್ಮನಾಭ ಶೆಟ್ಟಿ ಅಗರಿ ಮತ್ತು ಮನೆಯವರು ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಆಯೋಜಿಸಿದರು.

ಕಾರ್ಯದರ್ಶಿ ವಿಜಯ ಕುಮಾರ ರೈ, ಇವರು ಸ್ವಾಗತಿಸಿದರು. ಗ್ರಾಮ ಸಮಿತಿಯ ಎಲ್ಲ ಬಂಟ ಬಂಧುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here