ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಮೆಚ್ಚಿ ಮೂರು ಹೊಸ ಸಂಘ ರಚನೆ

0

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಉಜಿರೆ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಉಜಿರೆಯಲ್ಲಿ ಕುಡುಮ ಶ್ರೀ, ಸ್ವಾಮಿ ಸನ್ಯಾಸಿ ಅಜ್ಜ, ಶ್ರೀ ರಾಮಾಂಜನೇಯ ಎಂಬ 3 ಹೊಸ ಸ್ವ-ಸಹಾಯ ಸಂಘವನ್ನು ಉದ್ಘಾಟನೆ ಮಾಡಲಾಯಿತು.ಮಾನ್ಯ ಯೋಜನಾಧಿಕಾರಿ ಸುರೇಂದ್ರ ರವರಿಂದ ಹೊಸ ಸಂಘಗಳ ಉದ್ಘಾಟನೆ ಮಾಡಿ ದಾಖಲಾತಿ ಹತ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಉಜಿರೆಯ ಒಕ್ಕೂಟದ ಅಧ್ಯಕ್ಷೆ ಲೀಲಾವತಿ, ವಲಯ ಮೇಲ್ವಿಚಾರಕಿ ವನಿತ, ಸಂಘ ರಚನೆಗೆ ಸಹಕರಿಸಿದ ದೇವರಾಜ್, ತಾಲೂಕಿನ ಕೃಷಿ ಮೇಲ್ವಿಚಾರಕ ರಾಮ್ ಕುಮಾರ್, ಸೇವಾ-ಪ್ರತಿನಿಧಿಗಳಾದ ಪ್ರೇಮಲತಾ ಹಾಗೂ ಪ್ರಮೀಳಾ ಹಾಗೂ ಹೊಸ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here