ಮಂಗಳೂರಿನಲ್ಲಿ ಕಾಂಗ್ರೆಸ್ ಗತ ವೈಭವದ ಪುನರ್ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದೆ- ವಿಶ್ವಾಸ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ವಕ್ತಾರ ಸಂದೀಪ್ ನೀರಲ್ಕೆ

0

ಬೆಳ್ತಂಗಡಿ: ಸುದೀರ್ಘ ವರ್ಷಗಳಿಂದ ಕಳೆದುಕೊಂಡಿದ್ದ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಪಡೆಯಲಿದೆ.

ಅಭಿವೃದ್ಧಿ ಹಾಗೂ ಸಾಮರಸ್ಯವನ್ನು ಆಧ್ಯತೆಯಾಗಿರಿಸಿ ನಮ್ಮ ಪಕ್ಷ ಓರ್ವ ಸದೃಢ, ಸಮರ್ಥ, ಕರಾವಳಿಯ ದಶಕಗಳ ಬೇಡಿಕೆಗಳ ಸಾಕಾರದ ತುಡಿತ ಹೊಂದಿರುವ ಪದ್ಮರಾಜ್ ರಾಮಯ್ಯ ರವರನ್ನು ಕಣಕ್ಕೆ ಇಳಿಸಿದೆ.

ಇದುವರೆಗೆ ಭಾವಾನಾತ್ಮಕ ವಿಚಾರಗಳನ್ನು ಕೆದಕಿ ರಾಜಕೀಯ ಮಾಡುತ್ತಿದ್ದ ಪಕ್ಷಗಳು ಈ ಬಾರಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಎಷ್ಟೇ ಮಾಡಿದರೂ ಸಹ ಕಾಂಗ್ರೆಸ್ ನ ಗೆಲುವನ್ನು ತಪ್ಪಿಸಲಾಗದು.

ಈ ಒಂದು ಮಹೋನ್ನತ ಅವಕಾಶವನ್ನು ಕರಾವಳಿಯ ಪ್ರಜ್ಞಾವಂತ ನಾಗರಿಕರು ಕಳೆದುಕೊಳ್ಳುವುದಿಲ್ಲ, ಖಂಡಿತವಾಗಿಯೂ ಜನ ಕಾಂಗ್ರೆಸ್ ನ ಕೈ ಹಿಡಿಯಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವಕ್ತಾರ ಸಂದೀಪ್ ಎಸ್ ನೀರಲ್ಕೆ ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here