ವೇಣೂರು: ಪೆರ್ಮುಡ 31ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳದ ಉದ್ಘಾಟನೆ

0

ವೇಣೂರು: ಪೆರ್ಮುಡದಲ್ಲಿ 31ನೇ ವರ್ಷದ ಸೂರ್ಯ-ಚಂದ್ರ ಜೂಡುಕರೆ ಕಂಬಳಕ್ಕೆ ಇಂದು(ಮಾ.23)ರಂದು ಚಾಲನೆ ನೀಡಲಾಯಿತು.

ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲರು ಕಂಬಳ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ವಿಜಯರಾಜ ಅಧಿಕಾರಿ ಮಾರಗುತ್ತು, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಭಾಸ್ಕರ ಬಲ್ಯಾಯ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಅನಿತಾ, ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ತೇಜಾಕ್ಷಿ, ವೇಣೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಪದ್ಮಾಂಬ ಕ್ಯಾಟರಿಂಗ್ ಮಾಲಕ ನಾಗಕುಮಾರ್, ಗುಂಡೂರಿ ಸತ್ಯನಾರಾಯಣ ಭಜನಾ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ ಪಡ್ಡಾಯಿಮಜಲು, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ನಿರಂಜನ್ ಕೆ.ಎಸ್., ಕುಕ್ಕೇಡಿ ಹಾಲು ಉತ್ಪಾದರ ಸಹಕಾರ ಸಂಘದ ದಯಾನಂದ ದೇವಾಡಿಗ, ಬಳಂಜ ಗ್ರಾ.ಪಂ ಸದಸ್ಯ ರವೀಂದ್ರ ಅಮೀನ್, ವೇಣೂರು ರಮ್ಯಾ ಫ್ಯಾನ್ಸಿಯ ನಾರಾಯಣ ಪೂಜಾರಿ, ಕುಕ್ಕೇಡಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸದಾನಂದ, ಎಂ.ರಫೀಕ್ ಬಾಂಬಿಲ, ಜಿ.ಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಕಂಬಳದ ಸಲಹೆಗಾರರಾದ ಕರುಣಾಕರ, ಸ್ಟೀವನ್ ಮೋನಿಸ್, ಪದಾಧಿಕಾರಿಗಳು, ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.

ಕಂಬಳ ಸಮಿತಿ ಅಧ್ಯಕ್ಷ ಹಾಗೂ ಬೆಳ್ತಂಗಡಿ ಗು.ನಾ.ಸೇ.ಸಂ ಪ್ರ.ಕಾ. ನಿತೀಶ್ ಹೆಚ್ ಕೋಟ್ಯಾನ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here