ಕಾರು ಹಾಗೂ ಒಮಿನಿ ವಾಹನದಲ್ಲಿ ಬಂದ ತಂಡದಿಂದ ಜೀವ ಬೆದರಿಕೆ ಆರೋಪ- ಬೆಳ್ತಂಗಡಿ ಪೊಲೀಸರಿಗೆ ದೂರು

0

ಬೆಳ್ತಂಗಡಿ: ತನ್ನನ್ನು ತಡೆದು ಮೂವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬೆಳ್ತಂಗಡಿ ನಿವಾಸಿ ಹರೀಶ್ ಆಚಾರ್ಯ(35) ಎಂಬವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹರೀಶ್ ಆಚಾರ್ಯ ಅವರು ಮಾ.21ರಂದು ರಾತ್ರಿ ಉಜಿರೆ ಗ್ರಾಮದ ರಥ ಬೀದಿಯಲ್ಲಿ ಇರುವ ಸಮಯ ಮನೋಜ್ (35), ಕಲ್ಮಂಜ ಬೆಳ್ತಂಗಡಿ ಪ್ರಜ್ವಲ್ ಗೌಡ ಕೆ ವಿ (35) ಹಾಗೂ ಉಜಿರೆ ಬೆಳ್ತಂಗಡಿ ಜಯಂತ (34) ಎಂಬವರುಗಳು ಕೆಎ-21-ಎನ್-9957 ನೇ ನಂಬ್ರದ ಕಾರು ಹಾಗೂ ಒಮಿನಿ ಗಾಡಿಯಲ್ಲಿ ಬಂದು ನನ್ನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಹರೀಶ್ ಅವರ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 38/2024 : 143,147,341,504,506, r/w 149 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here