ಬೆಳ್ತಂಗಡಿ ತಾಲೂಕು ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ಜೈಸನ್ ಪಿ.ಎಸ್ ರವರಿಗೆ ಕೆ.ಎಸ್.ಎಂ.ಸಿ.ಎ ವತಿಯಿಂದ ಅಭಿನಂದನೆ

0

ಬೆಳ್ತಂಗಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ತಾಲೂಕು ಗ್ರಾಮೀಣ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೈಸನ್ ಪಟ್ಟೆರಿ ಯವರಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯ ದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೊಸಿಯೇಷನ್ ಸಂಘಟನೆಯ ಪರವಾಗಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಜೈಸನ್ ಪಿ.ಎಸ್ ಕೆ.ಎಸ್.ಎಂ.ಸಿ.ಎ ಧರ್ಮಸ್ಥಳ ವಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ತಮ್ಮ ಸೇವಾ ಅವಧಿಯಲ್ಲಿ ಬಹುಮುಖ ಚಟುವಟಿಕೆಗಳ ಮೂಲಕ ಹಲವಾರು ಸಾಮಾಜಿಕ ಮತ್ತು ಕ್ರೀಡಾ ಚಟುವಟಿಕೆಗಳ ಮುಖಾಂತರ ಓರ್ವ ಉತ್ತಮ ಸಂಘಟಕ ಎಂಬ ಹೆಸರನ್ನು ಪಡೆದಿದ್ದಾರೆ.

ಧರ್ಮ ಪ್ರಾಂತ್ಯ ರಜತ ಸಂಭ್ರಮದ ಕ್ರೀಡಾ ಕೂಟಗಳನ್ನು ಯಶಸ್ವೀ ಗೊಳಿಸುವಲ್ಲಿ ಜೈಸನ್ ನೀರ್ಣಾಯಕ ಕೊಡೆಗೆಯನ್ನು ನೀಡಿದ್ದಾರೆ.ಈ ಸಂದರ್ಭದಲ್ಲಿ ಕೆ ಎಸ್ ಎಂ ಸಿ ಎ ಇದರ ಕೇಂದ್ರೀಯ ನಿರ್ದೇಶಕರು ಆಗಿರುವ ವಂದನಿಯ ಫಾ.ಶಾಜಿ ಮಾತ್ಯು ಪದೋನ್ನತಿಯಲ್ಲಿ ಯಶಸ್ಸನ್ನು ಹಾರೈಸಿದ್ದಾರೆ.

ಅಧ್ಯಕ್ಷ ಬಿಟ್ಟಿ ನೆಡುನಿಲಂ, ಸೇಬಾಷ್ಟಿಯನ್ ಎಂ ಜೆ ಪ್ರದಾನ ಕಾರ್ಯದರ್ಶಿಗಳು, ಬೆನ್ನಿ ಕೋಲಮ್ಚೇರಿ ಉಪಾಧ್ಯಕ್ಷರು, ಸೇಭಾಸ್ಟಿಯನ್, ಪಿ ಆರ್ ಓ, ಜಾರ್ಜ್ ಟಿ ವಿ, ಅಲ್ಫೋನ್ಸ, ರೀನಾ ಸಿಬಿ ಧರ್ಮಸ್ಥಳ ಕೇಂದ್ರ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here