ಬೆಳ್ತಂಗಡಿ: ಲಾಯಿಲ ಜ್ಯೋತಿ ಹಾಸ್ಪಿಟಲ್ ವತಿಯಿಂದ ಕುತ್ಲೂರಿನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ

0

ಬೆಳ್ತಂಗಡಿ: ಲಾಯಿಲ ಜ್ಯೋತಿ ಆಸ್ಪತ್ರೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.17ರಂದು ನಾರಾವಿ ಸನಿಹದ ಕುತ್ಲೂರಿನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಸಮಾಜದಲ್ಲಿ ಹಿಂದುಳಿದ ಮಹಿಳೆಯರಿಗಾಗಿ ಕೂತ್ಲೂರು ಕಾನ್ವೆಂಟ್‌ನಲ್ಲಿ ಈ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತು.

ಪ್ರಸ್ತುತ ಶಿಬಿರದಲ್ಲಿ ಸ್ತ್ರೀ ಸಹಜ ರೋಗಗಳಿಗೆ ಬೆಳ್ತಂಗಡಿ ಜ್ಯೋತಿ ಆಸ್ಪತ್ರೆಯಿಂದ ವೈದ್ಯೆ ಡಾ.ಸಿಸ್ಟರ್ ಆನ್ ಗ್ರೇಸ್ ಮತ್ತು ತಂಡದವರು ರೋಗದ ಕುರಿತು ಬೇಕಾದ ಮಾಹಿತಿಗಳನ್ನು ಕೊಟ್ಟು ಶಿಬಿರವನ್ನು ನಡೆಸಿಕೊಟ್ಟರು.

ಈ ಶಿಬಿರದಲ್ಲಿ ಕ್ಯಾನ್ಸರ್ ರೋಗದ ಕುರಿತಾದ ಮಾಹಿತಿಗಳು, ಸಾಮಾನ್ಯ ಆರೋಗ್ಯ ತಪಾಸಣೆ, ಅನೀಮಿಯ ಸ್ಕ್ರೀನಿಂಗ್ ಪ್ರೋಗ್ರಾಮ್ ಮೊದಲಾದ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here