ಮಿತ್ತಬಾಗಿಲುವಿನಲ್ಲಿ ಬಾವಿಗೆ ಬಿದ್ದ ಕಾಳಿಂಗ ಸರ್ಪ- ಲಾಯಿಲದ ಸ್ನೇಕ್ ಅಶೋಕ್ ರಿಂದ ರಕ್ಷಣೆ

0

ಮಿತ್ತಬಾಗಿಲು: ಪಗರೆ ನಿವಾಸಿ ಕುಶಾಲಪ್ಪ ಗೌಡ ಅವರ ಮನೆಯ ಸಮೀಪದ‌ ಬಾವಿಯೊಳಗೆ ಕಾಳಿಂಗ ಸರ್ಪ ಇರುವುದನ್ನು ಮನೆಯವರು ಗಮನಿಸಿದ್ದು, ಈ ಬಗ್ಗೆ ಲಾಯಿಲದ ಉರಗ ತಜ್ಞ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಿದ್ದಾರೆ.

ಅಶೋಕ್ ಅವರು ಸ್ಥಳಕ್ಕೆ ತೆರಳಿ ಬಾವಿಯಿಂದ ಕಾಳಿಂಗ ಸರ್ಪವನ್ನು ಹೊರತಂದು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಈಗಾಗಲೇ ನೂರಾರು ಕಾಳಿಂಗ ಸರ್ಪಗಳನ್ನು ರಕ್ಷಿಸಿರುವ ಅಶೋಕ್ ಅವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here