ಬೆಳ್ತಂಗಡಿ: ಜೆಸಿಐ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಎಚ್.ಡಿ ಯವರಿಗೆ ‘ಸಿಲ್ವರ್ ಸ್ಟಾರ್ ಪ್ರೆಸಿಡೆಂಟ್’ ಪುರಸ್ಕಾರ

0

ಬೆಳ್ತಂಗಡಿ: ಜೆಸಿಐ ಭಾರತದ ವಲಯ 15ರ ಜೆಸಿಐ ಕ್ಲಬ್ (JAC) ಇದರ 2024ನೇ ಸಾಲಿನ ಪದಪ್ರಧಾನ ಕಾರ್ಯಕ್ರಮವು ಕಾಪುವಿನಲ್ಲಿ ಜರುಗಿತು.

ಈ ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು, ಜೆ.ಎ.ಸಿ ಯ ಸದಸ್ಯತ್ವವನ್ನು ಘಟಕದಿಂದ ಪಾವತಿಸಿರುವ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಜೆಸಿ ರಂಜಿತ್ ಎಚ್.ಡಿ.ಬಳಂಜ ಇವರಿಗೆ ಜೆಸಿಐ ಭಾರತದ ಪೂರ್ವ ರಾಷ್ಟೀಯ ಅಧ್ಯಕ್ಷ ಜೆಸಿ ಅನೀಶ್ ಸಿ ಮ್ಯಾಥಿವ್ “ಸಿಲ್ವರ್ ಸ್ಟಾರ್ ” ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರ ಗಿರೀಶ್ ಎಸ್ ಪಿ, ವಲಯದ ಜೆ.ಎ.ಸಿ.ಯ ನೂತನ ಅಧ್ಯಕ್ಷ ಲೋಕೇಶ್ ರೈ, ವಲಯ ಉಪಾಧ್ಯಕ್ಷ ಶಂಕರ್ ರಾವ್ ಬಿ, ಜೆಎಸಿಯ ನೂತನ ವಲಯ ನಿರ್ದೇಶಕ ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here