ಉಜಿರೆ: ಸರ್ಕಾರಿ ಬಸ್ ಚಾಲಕನಿಂದ ಬೈಕ್ ಸವಾರನ ಮೇಲೆ ಹಲ್ಲೆ

0

ಧರ್ಮಸ್ಥಳ: ಧರ್ಮಸ್ಥಳದಿಂದ ಶಿವಮೊಗ್ಗ ಕಡೆಗೆ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಹಾಗೂ ಧರ್ಮಸ್ಥಳದಿಂದ ಉಜಿರೆ ಕಡೆಗೆ ದ್ವಿಚಕ್ರದಲ್ಲಿ ಪ್ರಯಾಣಿಸುತ್ತಿದ್ದ ಬಾಲಪ್ಪ ಹಾಗೂ ಹೆಂಡತಿ ಮಂಜುಳಾ ಮತ್ತು ಮಗು, ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಸೈಡ್ ಬಿಡದೆ ಇರುವ ಕಾರಣ ಇಬ್ಬರ ನಡುವೆ ಹೊಡೆದಾಟ ನಡೆದ ಘಟನೆ ಮಾ.12ರಂದು ಸಂಜೆ ನಡೆದಿದೆ.

ಉಜಿರೆ ಪೇಟೆಯಲ್ಲಿ ಬಸ್ ಮತ್ತು ಬೈಕು ಸವಾರರು ನಿಲ್ಲಿಸಿ ಅವ್ಯಾಚ್ಯ ಶಬ್ದಗಳಿಂದ ಮಾತನಾಡಿಕೊಂಡು ಬಸ್ ಸವಾರ ಬಸ್ಸಿನಿಂದ ಕೆಳಗೆ ಇಳಿದು ಬಂದು ಬೈಕ್ ಸವಾರನ ಮೇಲೆ ಏಕಾಏಕಿ ದಾಳಿ ನಡೆಸಿದಾಗ ಬೈಕ್ ಸವಾರನು ಪ್ರತಿ ದಾಳಿಯಾಗಿ ತನ್ನ ಹೆಲ್ಮೆಟ್ ನಿಂದ ದಾಳಿ ಮಾಡಿದ್ದಾನೆ, ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳದಲ್ಲಿ ಸಾರ್ವಜನಿಕರು ಸೇರಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

LEAVE A REPLY

Please enter your comment!
Please enter your name here