ಮಾಯ ಸುಗ್ಗಿ ಪುರುಷರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಶಶಿಧರ ಆಚಾರ್ಯ, ಕಾರ್ಯದರ್ಶಿಯಾಗಿ ದಯಾನಂದ ಪಿ

0

ಬೆಳಾಲು: ಸುಗ್ಗಿ ಹುಣ್ಣಿಮೆಯ ಸಂದರ್ಭದಲ್ಲಿ ಮನೆ ಮನೆಗೆ ವೇಷ ಹಾಕಿ ಹೋಗುವ ಪುರುಷರ ಮಾಯ ಸುಗ್ಗಿ ಪುರುಷರ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಶಿಲ್ಪಿ ಶಶಿಧರ ಆಚಾರ್ಯ ಗಾಂಧಿ ನಗರ, ಕಾರ್ಯದರ್ಶಿಯಾಗಿ ದಯಾನಂದ ಪಿ.ಪೆಲತ್ತಡಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಗೌಡ ಅಮುಂಜಿ ಹಾಗೂ ಗೌರವಾಧ್ಯಕ್ಷರಾಗಿ ನಾರಾಯಣ ಸುವರ್ಣ ಮಂಜನೊಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ಲು, ಉಪಾಧ್ಯಕ್ಷರುಗಳಾಗಿ ಲಕ್ಷ್ಮಣ ಗೌಡ ಪುಳಿತ್ತಡಿ, ಓಬಯ್ಯ ಗೌಡ ಹುಣಿಸೆದಡಿ,ಜತೆ ಕಾರ್ಯದರ್ಶಿಗಳಾಗಿ ಪೆರಣ ಗೌಡ ಪರಾರಿ, ರಾಧಾಕೃಷ್ಣ ಮಾಯ, ಸದಸ್ಯರುಗಳಾಗಿ ಚೆನ್ನಪ್ಪ ಗೌಡ ಅಂಬ್ಯ, ಕೊರಗಪ್ಪ ಗೌಡ ಉರೆಜ್ಜ, ಬಾಬು ಗೌಡ ದೇರೆಮಾರು, ರಘು ಶೆಟ್ಟಿಗಾರ ಮುರ್ಲೆಗುಂಡಿ, ಬಾಲಕೃಷ್ಣ ಗೌಡ ಪುಚ್ಚೆಹಿತ್ಲು, ಸುರೇಶ ದಾಸಯ್ಯ ಗಾಂಧಿನಗರ, ಪ್ರವೀಣ್ ಕಪ್ಪೆಲ್ಲ, ಕೃಷ್ಣಪ್ಪ ಗೌಡ ಬೆರ್ಕೆಜಾಲು, ಜಾರಪ್ಪ ಪೂಜಾರಿ ಪೆಲತ್ತಡಿ, ಗಂಗಾಧರ ಪೂಜಾರಿ ಎರ್ಮಲ್ಕೆ, ಬಾಲಕೃಷ್ಣ ಗೌಡ ಮುಂಡ್ರೋಟ್ಟು, ಸುಂದರ ಪೂಜಾರಿ ಮಾತೃಶ್ರೀ, ಕೇಶವ ಗೌಡ ಮಾರ್ಪಲು, ರಮೇಶ್ ಗೌಡ ಅಂಗಡಿಬೆಟ್ಟು, ದಿನೇಶ್ ಗೌಡ ಅರಿಪಾದೆ, ನಾರಾಯಣ ಮಡಿವಾಳ ಮಂಜುಶ್ರೀ, ಪುರುಷೋತ್ತಮ ಪೋಯ್ಯದಡ್ಡ, ದಿನೇಶ್ ಗೌಡ ಮಾರ್ಪಲು, ಪ್ರವೀಣ್ ಪೆಲತ್ತಡಿ, ಸುರೇಶ ಗೌಡ ಬರೆಮೇಲು, ಗೌರವ ಸಲಹೆಗಾರರಾಗಿ ರಾಜಪ್ಪ ಗೌಡ ಪುಚ್ಚೆಹಿತ್ಲು, ಸಂಜೀವ ಗೌಡ ಕನಿಕ್ಕಿಲ, ಕುಂಭ ಗೌಡ ಬರೆಮೇಲು, ಶೇಖರ್ ಗೌಡ ಕೊಲ್ಲಿಮಾರು, ಗಂಗಯ್ಯ ಗೌಡ ಹಳೆಮನೆ, ದಿನೇಶ್ ಕೋಟ್ಯಾನ್ ಎರ್ಮಲ ಇವರನ್ನು ಆಯ್ಕೆ ಮಾಡಲಾಯಿತು.

ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಪದ್ಮ ಗೌಡ ಮತ್ತು ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ ಇವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಆಯ್ಕೆಯಾಯಿತು.

LEAVE A REPLY

Please enter your comment!
Please enter your name here