ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹೆತ್ತವರ ಸಭೆ

0

ಉರುವಾಲು: ಇಲ್ಲಿನ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಾ.5ರಂದು ಹೆತ್ತವರ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ , ಪುತ್ತೂರು ಪ್ರಗತಿ ಆಸ್ಪತ್ರೆ MD ಡಾ.ಅನನ್ಯ ಲಕ್ಷ್ಮೀ ಸಂದೀಪ್ MBBS, ಇವರು ಆಗಮಿಸಿದ್ದು “ಪರೀಕ್ಷಾ ಸಿದ್ಧತೆಯಲ್ಲಿ ವಿದ್ಯಾರ್ಥಿಗಳ ಹಾಗೂ ಪೋಷಕರ ಪಾತ್ರ” ಈ ವಿಷಯದ ಕುರಿತು ಹಲವು ವಿಚಾರಗಳನ್ನು ಹೆತ್ತವರಿಗಾಗಿ ಹಂಚಿಕೊಂಡರು.

ಮಕ್ಕಳ ಬೆಳವಣಿಗೆಗೆ ಮೊಬೈಲ್ ಬಳಕೆ ಎಷ್ಟು ಮಾರಕ ಎಂಬುದನ್ನು ಕೂಡ ತಿಳಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿ ನಿಯರಿಂದ ಪ್ರಾರ್ಥನೆ ನೆರವೇರಿತು.

ಬಳಿಕ ಪೋಷಕರನ್ನು, ವಿಶೇಷ ಅತಿಥಿಗಳನ್ನು ಶಾಲಾ ಮುಖ್ಯ ಶಿಕ್ಷಕಿ ಶೋಭಿತ ಕೆ ಆರ್ ಇವರು ಸ್ವಾಗತಿಸಿದರು.

ಬಳಿಕ ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀಧರ್ ಭಟ್ ಇವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here