ಮುಂಡೂರು ಪಳಿಕೆ ಸುಗ್ಗಿ ಪುರುಷರ ಕೂಟದ ಸಭೆ- ಅಧ್ಯಕ್ಷರಾಗಿ ವಿಶ್ವನಾಥ ಕಕ್ಕುದೋಳಿ, ಕಾರ್ಯದರ್ಶಿಯಾಗಿ ನಾರಾಯಣ ಗೌಡ ತೆಂಕುಬೈಲು ಆಯ್ಕೆ

0

ಕೊಕ್ಕಡ: ಮುಂಡೂರು ಪಳಿಕೆ ಸುಗ್ಗಿ ಪುರುಷರ ಕೂಟದ ಸಭೆಯನ್ನು ಮಾ.3ರಂದು ನಡೆಸಲಾಯಿತು.

ಈ ಸಭೆಯಲ್ಲಿ 2024ನೇ ಸಾಲಿನ ಪುರುಷರ ಕೂಟದ ನೂತನ ಅಧ್ಯಕ್ಷರಾಗಿ ಕೊಕ್ಕಡ ಗ್ರಾಮ ಪಂಚಾಯತ್ ನ ಸದಸ್ಯರಾದ ವಿಶ್ವನಾಥ ಕಕ್ಕುದೋಳಿ, ಕಾರ್ಯದರ್ಶಿಯಾಗಿ ಊರಿನ ಸಾಮಾಜಿಕ ಧಾರ್ಮಿಕ ಕಾರ್ಯಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸಿ ಸಲಹೆ ನೀಡುತ್ತಾ ತನ್ನನ್ನು ತಾನು ತೊಡಗಿಸಿಕೊಂಡಿರುವ ನಾರಾಯಣ ಗೌಡ ತೆಂಕುಬೈಲು ಇವರು ಆಯ್ಕೆಯಾಗಿದ್ದಾರೆ.

ಹಾಗೂ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.ಈ ವರ್ಷದ ಸುಗ್ಗಿ ಪುರುಷರ ಕೂಟದ ಸೇವೆಯು ಮಾ.19,20,21ರಂದು ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಮೊದಲ ದಿನದ ಸುಗ್ಗಿ ಪುರುಷರ ಕೂಟದ ಸೇವೆಯು ಬಾಬು ಎಂ.ಕೆ ಪಿತ್ತಿಲಕೋಡಿ ಇವರ ಮನೆಯಿಂದ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here