ಕಡಿರುದ್ಯಾವರ: ಹೇಡ್ಯದಲ್ಲಿ ಸಾರ್ವಜನಿಕ ಬಸ್ ತಂಗುದಾಣವನ್ನು ಪಂಚಾಯತ್ ಗೆ ಹಸ್ತಾಂತರಿಸುವ ಕಾರ್ಯಕ್ರಮ

0

ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಹೇಡ್ಯ ಎಂಬಲ್ಲಿ ಗುರುಹಿರಿಯರ ಸವಿನೆನಪಿನಲ್ಲಿ ವರದಾ ಪುರುಷೋತ್ತಮ ನಾಯಕ್ ಮತ್ತು ಮಕ್ಕಳು ನಿರ್ಮಿಸಿರುವ ಸಾರ್ವಜನಿಕ ಬಸ್ ತಂಗುದಾಣ ಪಂಚಾಯತ್ ಗೆ ಹಸ್ತಾಂತರಿಸುವ ಕಾರ್ಯಕ್ರಮವು ಮಾ.3ರಂದು ಜರಗಿತು.

ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಆಗಿರುವ ಅಶೋಕ್ ಕುಮಾರ್ ರವರು ಶುಭ ಕೋರಿದರು.

ಗಣೇಶ ಗೌಡ ಬರಮೇಲು ವಕೀಲರು ಶುಭ ಕೋರಿದರು.ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಲಿಜೋಸ್ಕರಿಯ ಹಾಗೂ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್.ಕೆ ಉಪಸ್ಥಿತರಿದ್ದರು.

ಕ.ರಾ.ರ.ಸಾ.ಸಂಸ್ಥೆಯ ಚಾಲಕ ವಿನಯಚಂದ್ರ ಮಾಯ ಬೆಳಾಲು ಹಾಗೂ ನಿರ್ವಾಹಕ ನಾರಾಯಣ ಪೂಜಾರಿ ಮುಂಡಾಜೆ ಶುಭ ಕೋರಿದರು.ಸ್ಥಳೀಯರು ಭಾಗವಹಿಸಿದ್ದರು.

ವರದಾ ಸ್ವಾಗತಿಸಿ, ಬಾಲಚಂದ್ರ ನಾಯಕ್ ನಿರೂಪಿಸಿ, ಮಂಜುಷ್ ನಾಯಕ್ ಧನ್ಯವಾದಗೈದರು.

LEAVE A REPLY

Please enter your comment!
Please enter your name here