ನಿವೃತ್ತ ಸಹಾಯಕ ಕೃಷಿ ಅಧಿಕಾರಿ ದಯಾನಂದ ಎಚ್ ರವರಿಗೆ ನುಡಿನಮನ

0

ಕುಕ್ಕೇಡಿ: ಇತ್ತೀಚೆಗೆ ನಿಧಾನರಾದ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಕುಕ್ಕೆಡಿ ನಿವಾಸಿ ದಯಾನಂದ ಎಚ್ ರವರಿಗೆ ನುಡಿನಮನ ಹಾಗೂ ಉತ್ತರ ಕ್ರಿಯೆ ಮಾ.2ರಂದು ಕುಕ್ಕೇಡಿ ಶ್ರೀ ದುರ್ಗಾ ನಿವಾಸದಲ್ಲಿ ನಡೆಯಿತು.

ಅವರ ಸಹೋದ್ಯೋಗಿ ಕೃಷಿ ಇಲಾಖೆಯ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಬೆಳಾಲು ಮೃತರಿಗೆ ನುಡಿ ನಮನ ಸಲ್ಲಿಸಿದರು.

ಕುಟುಂಬಸ್ಥರ ಪರವಾಗಿ ಸತೀಶ್ ಕೆ. ಕಾಶಿಪಟ್ಣ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.ಅವರ ಹಿತೈಷಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಂದುಗಳು ಹಾಜರಿದ್ದು ಶ್ರದ್ಧಾಂಜಲಿ ಅರ್ಪಿಸಿದರು.

ಪತ್ನಿ ಗುಣವತಿ, ಪುತ್ರ ನಿತೀಶ್ ಎಚ್, ಪುತ್ರಿಯರಾದ ನಿಶ್ಮಿತಾ, ನಿವೇದಿತಾ, ಕುಟುಂಬ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here