ಚಾರ್ಮಾಡಿಯಲ್ಲಿ ಎರಡು ದಿನಗಳಿಂದ ಕಾಣಿಸಿಕೊಂಡ ಒಂಟಿ ಸಲಗ

0

ಚಾರ್ಮಾಡಿ: ಫೆ.27ರಂದು ಕೋಡಿಹಿತ್ಲು ಪರಿಸರದಲ್ಲಿ ರಾತ್ರಿ 11.30ರ ವೇಳೆಗೆ ಕೃಷ್ಣ ಭಟ್ ರವರ ತೋಟದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.ತಕ್ಷಣ ಸ್ಪಂದಿಸಿದ ಸಿಬ್ಬಂದಿಗಳು ರಾತ್ರಿ ಇಲಾಖಾ ವಾಹನದಲ್ಲಿ 12 ಗಂಟೆಯಿಂದ 2.30ರವರೆಗೆ ಗಸ್ತು ತಿರುಗಿ ಆನೆಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಿದರು.

ದಿ.28ರಂದು ಬೆಳಗ್ಗೆ 8.30ಕ್ಕೆ ಹೊಸಮಠ ಪರಿಸರದಲ್ಲಿ ಬಿಜೂ ಮತ್ತು ಪ್ರಕಾಶ್ ರವರ ರಬ್ಬರ್ ತೋಟದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳ ಮತ್ತು ಸಾರ್ವಜನಿಕರ ಜಂಟಿ ಕಾರ್ಯಾಚರಣೆಯಲ್ಲಿ ಪಟಾಕಿ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಒಂಟಿ ಸಲಗವನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.

ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಗಿ, ಗಸ್ತು ಅರಣ್ಯ ಪಾಲಕರು ರವಿ, ಅರಣ್ಯ ವೀಕ್ಷಕರು ಗೋಪಾಲ, ಕಿಟ್ಟ, ರಮೇಶ್, ಇಲಾಖಾ ವಾಹನ ಚಾಲಕ ಕುಶಾಲಪ್ಪ ಗೌಡ, ಸ್ಥಳೀಯರಾದ ವಸಂತ, ಮಣಿಯಣ್ಣ, ಆನಂದ, ಪ್ರಕಾಶ್, ಬಿಜು, ಕೃಷ್ಣಪ್ಪ, ವಿನೋದ್, ಪ್ರಮೋದ್, ಅವಿನಾಶ್, ರವಿಚಂದ್ರನ್, ಸುಧಾಕರ, ಶಶಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here