ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಕಂಡದಬೆಟ್ಟು ದಿ.ಲಿಂಗಪ್ಪ ನಾಯ್ಕರಿಗೆ ನುಡಿ ನಮನ ಕಾರ್ಯಕ್ರಮ

0

ಬಡಕೋಡಿ: ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ದಿ.ಲಿಂಗಪ್ಪ ನಾಯ್ಕ ಕಂಡದಬೆಟ್ಟು ರವರು ಜ.16ರಂದು ನಿಧನರಾಗಿದ್ದು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಬಡಕೋಡಿ ಶ್ರೀ ಆದಿಶಕ್ತಿ ಮಹಾಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಫೆ.25ರಂದು ನುಡಿನಮನ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷ ಉಮೇಶ್ ನಾಯ್ಕ ಕೇಳ್ದಡ್ಕರವರು ಅಧ್ಯಕ್ಷತೆ ವಹಿಸಿದ್ದರು.

ಗೌರವ ಸಲಹೆಗಾರ ಸಂತೋಷ್ ಕುಮಾರ್, ಹೊಸಂಗಡಿ ಗ್ರಾ.ಪಂ ಸದಸ್ಯ ಹರಿಪ್ರಸಾದ್ ಪಿ, ಹೇಮಂತ್ ಭಟ್ ಅರ್ಜಾಲು, ಗಂಗಾಧರ ನಾಯ್ಕ, ಚಂದ್ರಶೇಖರ ನಾಯ್ಕ, ಸೇಸಪ್ಪ ನಾಯ್ಕ ಕಾಜೊಟ್ಟು, ಸದಾನಂದ ನಾಯ್ಕ ಬಡಕೋಡಿ, ಸುರೇಶ್ ನಾಯ್ಕ ಬಡಕೋಡಿ, ಪ್ರಸಾದ್ ನಾಯ್ಕ, ರವಿನಾಯ್ಕ ಬಡಕೋಡಿ ಮೊದಲಾದವರು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸತೀಶ್ ಹೆಚ್.ಎಲ್., ಪ್ರದಾನ ಕಾರ್ಯದರ್ಶಿ ತಾರನಾಥ ನಾಯ್ಕ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಪವಿತ್ರಾ ಲೋಕೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಾವತಿ, ರಾಘವೇಂದ್ರ ನಾಯ್ಕ, ಸುರೇಶ್ ಹೆಚ್.ಎಲ್, ಸಮುದಾಯದ ಗುರಿಕಾರ ಕುಪ್ಪಣ್ಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ರವಿನಾಯ್ಕ ಬಡಕೋಡಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here