ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ನಿಧನ

0

ಉಜಿರೆ: ಉಜಿರೆ ನಿವಾಸಿ ತಾಲೂಕಿನ ಹಿರಿಯ ಸಾಹಿತಿ, ಭಾಷಾ ತಜ್ಞ, ಕಾದಂಬರಿಕಾರ ಕೆ.ಟಿ. ಗಟ್ಟಿ(86) ಅವರು ಫೆ.19ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

40ಕ್ಕೂ ಅಧಿಕ ಕಾದಂಬರಿ, ಕಥೆಗಳು, ಕವಿತೆಗಳು, ನಾಟಕಗಳು ಹಾಗೂ ನೂರಾರು ವೈಚಾರಿಕ ಬರಹಗಳನ್ನು ಬರೆದಿರುವ ಗಟ್ಟಿಯವರು ಪ್ರಾಧ್ಯಾಪಕರಾಗಿದ್ದವರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ ಸಹಿತ ಹತ್ತಾರು ಪ್ರಶಸ್ತಿಗಳೂ ಕೆ.ಟಿ.ಗಟ್ಟಿ ಅವರಿಗೆ ಸಂದಿವೆ.

LEAVE A REPLY

Please enter your comment!
Please enter your name here