ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಬೆಳ್ತಂಗಡಿಯಿಂದ ಫೆ.17 ರಂದು ಮಂಗಳೂರಿನಲ್ಲಿ ನಡೆಯುವ ಸಮಾವೇಶದ ಪೂರ್ವಬಾವಿ ಸಭೆ

0

ಬೆಳ್ತಂಗಡಿ: ಫೆ.17 ರಂದು ಮಂಗಳೂರಿನಲ್ಲಿ ನಡೆಯುವ ಸಮಾವೇಶದ ಗ್ರಾಮ ಸಮಿತಿಯ ಪೂರ್ವಬಾವಿ ಸಭೆಯು ಚಾರ್ಮಾಡಿ ಚಿಬಿದ್ರೆ, ತೋಟತ್ತಾಡಿ, ಪುದುವೆಟ್ಟು, ನೆರಿಯ, ಕಲ್ಮಂಜದಲ್ಲಿ ನಡೆಯಿತು.

ಈ ಸಭೆಯಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ನಾಗೇಶ್ ಕುಮಾರ್ ಗೌಡ, ಉಜಿರೆ ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾದ ನಮಿತಾ ಪೂಜಾರಿ ಹಾಗೂ ಗ್ರಾಮೀಣ ಬ್ಲಾಕ್ ಎಸ್ ಸಿ ಘಟಕ ಅಧ್ಯಕ್ಷರಾದ ನೇಮಿರಾಜ್ ಕಿಲ್ಲೂರು, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಮುಖಂಡರಾದ ಎಂ ಏಚ್ ಮುಹಮ್ಮದ್ ಕಲಂದರ್ ಶಾ ಕೊಕ್ಕಡ, ತಾಲೂಕು ಉಸ್ತುವರಿಗಳಾದ ಅಶ್ರಫ್ ನೆರಿಯ, ನಾಮದೇವ ರಾವ್, ಯಶೋಧರ ಚಾರ್ಮಾಡಿ ಹಾಗೂ ಕಲ್ಮಂಜ ಗ್ರಾಮ ಸಮಿತಿಯಲ್ಲಿ ಪದ್ಮಪ್ಪ ಪೂಜಾರಿ, ಮುಂಡಾಜೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ಗೌಡ, ಚಾರ್ಮಾಡಿ ಚಿಬಿದ್ರೆ ಗ್ರಾಮ ಸಮಿತಿ ಅಧ್ಯಕ್ಷರುಗಳಾದ ನಝೀರ್ ಪಿಕೆ, ನಿತಿನ್ ವಲಸರಿ, ತೋಟತ್ತಾಡಿಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕೆಸಿ, ನೆರಿಯದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಲಕ್ಷಣ್ ಅಲಂಗಾಯ, ಪುದುವೆಟ್ಟುವಿನಲ್ಲಿ ಗ್ರಾಮ ಪ್ರಮುಖರಾದ ಬೊಮ್ಮಣ್ಣ ಗೌಡ ರಾಯ್ ಪುದುವೆಟ್ಟು ಹಾಗೂ ಬ್ಲಾಕ್ ಹಾಗೂ ಗ್ರಾಮ ಸಮಿತಿ ಮುಖ್ಯಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭೂ ನ್ಯಾಯ ಮಂಡಳಿ ಸದಸ್ಯರಾಗಿ ನೇಮಕಗೊಂಡ ಬೊಮ್ಮಣ್ಣ ಗೌಡ ಪುದುವೆಟ್ಟು, ಪ್ರದೀಪ್ ಕೆ ಸಿ ತೋಟತ್ತಾಡಿ, ಆರಾಧನಾ ಸಮಿತಿ ಸದಸ್ಯರಾದ ಲಕ್ಷಣ್ ಅಲಂಗಯ ನೆರಿಯ ಇವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here