ಫೆ.14: ಕಾರ್ಣಿಕ ಮೆರೆಯುತ್ತಿರುವ ಪಟ್ಲಡ್ಕ ಕೊಕ್ಕಡದ ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಕ್ಕೆ ಕೋಲ ಸೇವೆ

0

ಕೌಕ್ರಾಡಿ: ಕಳೆದ ನಾಲ್ಕು ವರ್ಷಗಳಿಂದ ಭಕ್ತರ ನಂಬಿಕೊಂಡು ಬರುತ್ತಿರುವ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಕೊಕ್ಕಡದ ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ದೈವದ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ದೈವದ ಕೊಲವು ಫೆ.14ರಂದು ದೈವ ಸನ್ನಿಧಿಯಲ್ಲಿ ನಡೆಯಲಿದೆ.

ಸಂಜೆ 5:30 ರಿಂದ ಧರ್ಮಶ್ರೀ ಭಜನಾ ಮಂಡಳಿ ಕೌಕ್ರಾಡಿ ಹಾಗೂ ವೈದ್ಯನಾಥೇಶ್ವರ ಭಜನಾ ಮಂಡಳಿ ಕೊಕ್ಕಡ ಇವರ ಭಜನಾ ಸೇವೆ ನಡೆಯಲಿದೆ.ಸಂಜೆ 7ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಪಟ್ಲಡ್ಕ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಅಧ್ಯಕ್ಷತೆ ವಹಿಸಲಿದ್ದಾರೆ.

ಕೊಕ್ರಾಡಿ ಪಂಚಾಯತ್ ಅಧ್ಯಕ್ಷ ಲೋಕೇಶ್ ಬಾಣಜಾಲು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಉಷಾ ಅಂಚನ್, ಜಯಾನಂದ ಬಂಟ್ರಿಯಾಲ್, ಡಾ. ರಘು ಬೆಳ್ಳಿ ಪಾಡಿ, ಧರ್ಮರಾಜ ಅಡ್ಕಾಡಿ, ನಾರಾಯಣಗೌಡ ಪಿ.ಕೆ., ಶಶೀಂದ್ರಪ್ಪ ಪಾಲ್ಗೊಳ್ಳಲಿದ್ದಾರೆ.ಬಳಿಕ ಅನ್ನ ಸಂತರ್ಪಣೆ ನೆರವೇರಲಿದೆ.ರಾತ್ರಿ 9:30ಕ್ಕೆ ಗಡಿಯಾಡಿ ಆದಿ ಮೊಗೇರ್ಕಳ ದೈವಗಳ ಗರಡಿ, ತನ್ನಿ ಮಾನಿಗ ದೈವದ ಗರಡಿ ಇಳಿಯಲಿದೆ.ಕೋಲ ಹಾಗೂ ಹರಕೆಯ ಅಗಲು ಸೇವೆ ನಡೆಯಲಿದೆ ಎಂದು ಸೇವಾ ಟ್ರಸ್ಟ್ ನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here