ಹೆಚ್ಚುವರಿ ವಿದ್ಯುತ್ ಸ್ಥಾವರ ಮಂಜೂರು ಮಾಡಲು ಮಾಜಿ ಸಚಿವ ಗಂಗಾಧರ ಗೌಡ ಇಂಧನ ಸಚಿವ ಕೆ.ಜೆ.ಜೋರ್ಜ್ ಗೆ ಮನವಿ

0

ಬೆಳ್ತಂಗಡಿ : ಮೆಸ್ಕಾಂ ಬೆಳ್ತಂಗಡಿ ಮತ್ತು ವೇಣೂರು ವಿಭಾಗಕ್ಕೆ ಹೆಚ್ಚುವರಿ 10 M.V. A. ಸಾಮರ್ಥ್ಯದ ಸ್ಥಾವರ ಮಂಜೂರು ಮಾಡಬೇಕು ಎಂದು ಬೆಳ್ತಂಗಡಿಯ ಮಾಜಿ ಸಚಿವ ಕೆ. ಗಂಗಾಧರ ಗೌಡ ಕರ್ನಾಟಕ ಸರಕಾರದ ಇಂಧನ ಸಚಿವ ಕೆ. ಜೆ. ಜೋರ್ಜ್ ರವರಿಗೆ ಮನವಿ ಮಾಡಿದರು.

ಫೆ.11ರಂದು ಸಚಿವರು ಬೆಳ್ತಂಗಡಿಗೆ ಆಗಮಿಸಿದ ಸಂದರ್ಭದಲ್ಲಿ ಮನವಿ ನೀಡಿ ಬೆಳ್ತಂಗಡಿ ಮತ್ತು ವೇಣೂರು ವಿಭಾಗದ ಕೃಷಿಕರು ವಿದ್ಯುತ್ ಅಭಾವದಿಂದ ರೈತರ ಕೃಷಿ, ತೋಟ ಹಾನಿ ಸಂಭವಿಸುವ ಆತಂಕದಲ್ಲಿದ್ದಾರೆ ವಿದ್ಯುತ್ ಸಮಸ್ಯೆಗೆ ಸ್ಪಂದಿಸಿ ಮಂಜೂರು ಮಾಡಬೇಕು ಎಂದು ಸಚಿವರಲ್ಲಿ ವಿನಂತಿಸಿದರು.

LEAVE A REPLY

Please enter your comment!
Please enter your name here