ತಣ್ಣೀರುಪಂತ ಗ್ರಾ.ಪಂ ಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

0

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮ ಪಂಚಾಯತ್ ಡಾ.ಶಿವರಾಮ ಕಾರಂತ್ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಫೆ.10 ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ “ಹೊಳಪು-2024 ಗ್ರಾಮ ಸರ್ಕಾರದ ದಿಬ್ಬಣ” ಜನ ಪ್ರತಿನಿಧಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಣ್ಣೀರುಪಂತ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಪ್ರಿಯಾ, ಸದಸ್ಯರುಗಳಾದ ಜಯವಿಕ್ರಮ್, ಫಾತಿಮಾತ್ ಇಶ್ರತ್, ತಾಜುದ್ದೀನ್, ಮಹಮ್ಮದ್ ಅಶ್ರಫ್, ಸುಧಾ ಎಂ., ಅನಿಲ್ ಪಾಲೇದು, ಆರತಿ, ನಪೀರಾ, ರಾಕೇಶ್, ಫಾತಿಮಾ, ಅಯ್ಯಬ್ ಡಿ.ಕೆ., ಕೇಶವ ನಾಯ್ಕ, ಸದಾನಂದ ಶೆಟ್ಟಿ, ದಿವ್ಯಾ, ಮಹಮ್ಮದ್ ನಿಸಾರ್, ಸುನಂದಾ, ಕೆ.ಎ.ಸಂಬ್ರಿದಾ, ಕೆ.ಲೀಲಾವತಿ, ಸಾಮ್ರಾಟ್ ಹಾಗೂ ನವೀನ್ ಕುಮಾ‌ರ್, ಅಭಿವೃದ್ಧಿ ಅಧಿಕಾರಿಯಾಗಿ ಶ್ರವಣ್ ಕುಮಾರ್ ಹಾಜರಿದ್ದರು.

LEAVE A REPLY

Please enter your comment!
Please enter your name here