ಶಾಸಕ ಹರೀಶ್ ಪೂಂಜರಿಂದ ಬೆಳ್ತಂಗಡಿ ಧರ್ಮಪ್ರಾಂತ್ಯ ಜುಬಿಲಿ ಸಿದ್ಧತೆಯ ವೀಕ್ಷಣೆ

0

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರವರು ಬೆಳ್ತಂಗಡಿ ಧರ್ಮಾಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿ ಧರ್ಮಪ್ರಾಂತ್ಯದ ರಜತ ಸಂಭ್ರಮ 2024, ಫೆ.11ರಂದು ನಡೆಯುವ ಬೆಳ್ಳಿ ಹಬ್ಬದ ಆಚರಣೆ ಮತ್ತು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಇವರ ಧರ್ಮಾಧ್ಯಕ್ಷ ದೀಕ್ಷೆಯ ಬೆಳ್ಳಿ ಹಬ್ಬ ಆಚರಣೆ ಸಿದ್ಧತೆಗಳನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದು, ಎಲ್ಲಾ ರೀತಿಯ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ವಿಕಾರ್ ಜೆನೆರಲ್ ಅತಿ ವಂದನಿಯ ಜೋಸ್ ವಲಿಯಪರಂಬಿಲ್, ಫೈನಾನ್ಸ್ ಆಫೀಸರ್ ವಂದನಿಯ ಫಾ.ಅಬ್ರಹಾಂ ಪಟ್ಟೀರಿ, ಕೆ ಎಸ್ ಎಂ ಸಿ ಎ-ಪಿ ಆರ್ ಓ ಸೇಬಾಷ್ಟಿಯನ್ ಪಿ ಸಿ, ಪ್ರಿನ್ಸ್ ತೋಟ್ಟತಾಡಿ ಮೊದಲಾದವರು ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here