ಗಂಡಿಬಾಗಿಲು ಸಿಯೋನ್ ಆಶ್ರಮದ ಸ್ಥಾಪಕ ಡಾ.ಯು.ಸಿ. ಪೌಲೋಸ್‌ರಿಗೆ ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ಅಭಿನಂದನಾ ಸಮಾರಂಭ

0

ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ಅಂತರಾಷ್ಟ್ರೀಯ ಸೀನಿಯ‌ರ್ ಛೇಂಬರ್‌ನ ರಾಷ್ಟ್ರದ ಜವಾಬ್ದಾರಿಯುತ ಹಾಗೂ ಕ್ರಿಯಾಶೀಲ ನಾಗರಿಕ ಪ್ರಶಸ್ತಿಗೆ ನಿಯೋಜಿಸಲ್ಪಟ್ಟ ಗಂಡಿಬಾಗಿಲಿನ ಸಿಯೋನ್ ಆಶ್ರಮದ ಸ್ಥಾಪಕ ಡಾ.ಯು.ಸಿ ಪೌಲೋಸ್‌ರವರನ್ನು ಅವರ ಆಶ್ರಮದಲ್ಲಿ ಸೀನಿಯರ್ ಛೇಂಬರ್‌ನ ಸದಸ್ಯರು ಫಲ ಪುಷ್ಪ ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸೀನಿಯ‌ರ್ ಛೇಂಬ‌ರ್ ಅಧ್ಯಕ್ಷ ಪೃಥ್ವಿರಂಜನ್ ರಾವ್‌, ಸ್ಥಾಪಕಾಧ್ಯಕ್ಷ ಪ್ರಮೋದ್ ಆ‌ರ್. ನಾಯಕ್‌, ಪೂರ್ವಾಧ್ಯಕ್ಷ ಪಿ.ಪಿ. ಜೋಯ್, ಉಪಾಧ್ಯಕ್ಷ ಹರೀಶ್‌ ಶೆಟ್ಟಿ, ಮೋಲ್ಸಿ ಜೋಯ್, ಸಿಯೋನ್ ಆಶ್ರಮದ ನಿರ್ದೇಶಕ ಮೇರಿ ಯು.ಪಿ., ಶೋಭಾ ಯು.ಪಿ. ಹಾಗೂ ಆಶ್ರಮದ ಎಲ್ಲಾ ನಿವಾಸಿಗಳು, ಕಾರ್ಯಕರ್ತರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಕ್ರಮಗಳಿಗೆ ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ರೂ.2 ಸಾವಿರ ಸಹಾಯಧನವನ್ನು ಸೀನಿಯ‌ರ್ ಛೇಂಬ‌ರ್ ಅಧ್ಯಕ್ಷ ಪೃಥ್ವಿರಂಜನ್ ರಾವ್‌ ರವರು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here