ಕಡಿರುದ್ಯಾವರ: ಕುರುಡ್ಯ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು- ನಗ, ನಗದು ಕಳ್ಳತನ

0

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಮುಸ್ತಫಾ ಎಂಬವರ ಮನೆಗೆ ರಾತ್ರಿ ನುಗ್ಗಿದ ಕಳ್ಳರು ನಗ ಮತ್ತು ನಗದು ಕಳ್ಳತನಗೈದಿದ್ದಾರೆ.ಫೆ.5 ರಂದು ಘಟನೆ ನಡೆದಿದೆ.

ಮುಸ್ತಫಾ ಅವರು ಅಂದು ತನ್ನ ಗೂಡ್ಸ್‌ ವಾಹನದ ಸರ್ವಿಸ್‌ ಗಾಗಿ ಚಿಕ್ಕಮಗಳೂರಿಗೆ ತೆರಳಿದ್ದವರು ಅಲ್ಲಿಯೇ ತಂಗಿದ್ದರು.ಇತ್ತ ಅವರ ತಾಯಿ ಮನೆಗೆ ಮನೆಗೆ ಬೀಗ ಹಾಕಿ ಹತ್ತಿರದಲ್ಲಿರುವ ಮುಸ್ತಫಾ ಅವರ ಚಿಕ್ಕಪ್ಪನ ಮನೆಗೆ ಹೋಗಿದ್ದರು.ಅದೇ ದಿನ ರಾತ್ರಿ ಮನೆಯ ಹೆಂಚು ತೆರೆದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ರೂ 1,71,000 ಮೌಲ್ಯದ ಚಿನ್ನಾಭರಣ ಹಾಗೂ ನಗದು ರೂ 1,20,000/- ಹಣವನ್ನು ಕಳವು ಮಾಡಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ‌ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 15/2024 ಕಲ;457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here