ಲೋಕಸಭಾ ಚುನಾವಣೆ 2024 ರ ಹಿನ್ನಲೆಯಲ್ಲಿ ಪಿ.ಎಸ್.ಐ ಗಳ ವರ್ಗಾವಣೆ: ಬೆಳ್ತಂಗಡಿಯ ಓಡಿಯಪ್ಪ ಗೌಡ, ಪುಂಜಾಲಕಟ್ಟೆಯ ನಂದ ಕುಮಾರ್ ವರ್ಗಾವಣೆ

0

ಬೆಳ್ತಂಗಡಿ: ಲೋಕಸಭಾ ಚುನಾವಣೆ 2024 ರ ಹಿನ್ನಲೆಯಲ್ಲಿ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪಿ.ಎಸ್.ಐ 2 ಆಗಿದ್ದ ಓಡಿಯಪ್ಪ ಗೌಡರನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಪುಂಜಾಲಕಟ್ಟೆ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಂದ ಕುಮಾರ್ ಎಂ ರವರನ್ನು ಪುತ್ತೂರು ನಗರ ಠಾಣೆಗೆ ವರ್ಗಾಯಿಸಲಾಗಿದೆ.

ಪುತ್ತೂರು ಸಂಚಾರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದಯ ರವಿ ರವರನ್ನು ಪುಂಜಾಲಕಟ್ಟೆಗೆ ವರ್ಗಾವಣೆ ಮಾಡಲಾಗಿದೆ.

ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯು.ಪಿ ನಾಗರಾಜ ರವನ್ನು ಬೆಳ್ತಂಗಡಿ ಸಂಚಾರ ಠಾಣೆಗೆ ಆಗಮಿಸಲಿದ್ದಾರೆ.

ಬಣಕಲ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ.ರೇಣುಕಮ್ಮ ಪುಂಜಾಲಕಟ್ಟೆ ಠಾಣೆಗೆ ವರ್ಗಾವಣೆಗೊಳ್ಳಲಿದ್ದಾರೆ

LEAVE A REPLY

Please enter your comment!
Please enter your name here