‘ಮಹೇಶ್ ಶೆಟ್ಟಿ ಜೊತೆ ಗಣೇಶ್ ಶೆಟ್ಟಿ ಬಂದರೆ ಕೊಲ್ಲದೇ ಬಿಡುವುದಿಲ್ಲ’-ಬೆದರಿಕೆ: ಜಯಪ್ರಕಾಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0

ಬೆಳ್ತಂಗಡಿ: ಉಜಿರೆ ಗ್ರಾಮದ ಕಾಲೇಜು ರಸ್ತೆಯಲ್ಲಿರುವ ಫ್ಯಾಶನ್ ಫೀಟ್ ಚಪ್ಪಲಿ ಮಳಿಗೆಗೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪದಡಿ ಜಯಪ್ರಕಾಶ್ ಶೆಟ್ಟಿ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಉಜಿರೆ ಗ್ರಾಮದ ಕಾಶಿಬೆಟ್ಟು ಅರಳಿ ನಿವಾಸಿ ಕೆ. ಭಾಸ್ಕರ್(45ವ)ರವರು ದೂರು ನೀಡಿದ್ದು ಜಯಪ್ರಕಾಶ್ ಶೆಟ್ಟಿ ಅಲಿಯಾಸ್ ಜೆ.ಪಿ. ಎಂಬವರು ಉಜಿರೆ ಗ್ರಾಮದ ಕಾಲೇಜ್ ರಸ್ತೆಯಲ್ಲಿರುವ ಫ್ಯಾಶನ್ ಫೀಟ್ ಚಪ್ಪಲಿ ಮಳಿಗೆಗೆ ಅಕ್ರಮ ಪ್ರವೇಶ ಮಾಡಿ ನನ್ನ ಸಮಕ್ಷಮದಲ್ಲಿ ಗಣೇಶ್ ಶೆಟ್ಟಿ ಎಂಬವರನ್ನುದ್ದೇಶಿಸಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ನನ್ನ ಮಧ್ಯೆ ಗಣೇಶ್ ಶೆಟ್ಟಿ ಬರಬಾರದು.ಅವನದು ಯಾವುದೂ ನನ್ನಲ್ಲಿ ನಡೆಯಲ್ಲ. ಮಹೇಶ್ ಶೆಟ್ಟಿ ಜೊತೆ ಗಣೇಶ್ ಶೆಟ್ಟಿ ಬಂದಲ್ಲಿ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ನಂತರ ಅಂಗಡಿಯ ಎದುರು ಪಾರ್ಕ್ ಮಾಡಿದ ಮಾರುತಿ ವಾಹನದಲ್ಲಿ ಇಡಲಾದ ಕತ್ತಿಯನ್ನು ತೋರಿಸಿ ಗಣೇಶ್ ಶೆಟ್ಟಿ ಸಿಕ್ಕಿದಲ್ಲಿ ಆತನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here