ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ

0

ಮಡಂತ್ಯಾರು: ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ ಜ.30 ರಂದು ಆಚರಿಸಲಾಯಿತು.

ಮಡಂತ್ಯಾರು ಗ್ರಾ.ಪಂ ಅಧ್ಯಕ್ಷೆ ರೂಪ ಎ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಹರೆಕಳ ಹಾಜಬ್ಬ ಅಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಅತಿಥಿಗಳಾಗಿ ಉಪಾಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ವಿಶ್ವನಾಥ ಪೂಜಾರಿ, ಕಿಶೋರ್ ಕುಮಾರ್, ಪ್ರಗತಿಪರ‌ ಕ್ರಷಿಕ ಪ್ರಭಾಕರ್, ಬಂಗೇಕಟ್ಟೆ ಮಸೀದಿಯ ಮುಖ್ಯಸ್ತರಾದ ಯಂ ಆರ್ ಹೈದರ್, ಜೇಸಿಐ ಮಡಂತ್ಯಾರು ಇದರ ಉಪಾಧ್ಯಕ್ಷೆ ಅಮಿತಾ ಬಂಡಾರಿ, ಗ್ರಾಮ ಪಂ ಸಿಬಂದಿ ಪ್ರಮೀಳಾ, ಸಮುದಾಯ ಅರೋಗ್ಯ ಕಾರ್ಯಕರ್ತೆ ಜೆಸ್ಸಿ ಫೆರ್ನಾಂಡಿಸ್, ಅಶಾ ಕಾರ್ಯಕರ್ತೆ ಜಾನಕಿ, ಹೇಮಾವತಿ, ಸುನಂದ ಉಪಸ್ಥಿತರಿದ್ದರು.

ಹನೀಫ್ ಸಾಲುಮರ, ಜಯಂತಿ ಹಾರಬೆ, ಹಕೀಂ ಬಂಗೇರಕಟ್ಟೆ, ಬಿಗ್ ಬ್ರದರ್ಸ ಸಾಲುಮರ ದಾನಿಗಳಾಗಿ ಸಹಕಾರ ನೀಡಿದರು.ಹೇಮಾವತಿ ಶೆಟ್ಟಿ, ಶ್ಯಾಮಲ ಹೆಗ್ಡೆ, ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಹೆತ್ತವರು, ಅಂಗನವಾಡಿ ಸಹಾಯಕಿ, ಊರಿನ ಯವಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಇರ್ಪಾನ್ ಸಾಲುಮರ ಕಾರ್ಯಕ್ರಮ ನಿರೂಪಿಸಿದರು.ಸಮೀಮಾ ಸ್ವಾಗತಿಸಿ ಸಂದ್ಯಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here