ಯೋಧ ಏಕನಾಥ್ ಶೆಟ್ಟಿಯವರ ಪುತ್ಥಳಿಗೆ ವೀರಯೋಧ ಪ್ರಾಂಜಲ್ ರವರ ಮನೆಯವರಿಂದ ಮಾಲಾರ್ಪಣೆ-ಮನೆಯವರೊಂದಿಗೆ ಮಾತುಕತೆ

0

ಗುರುವಾಯನಕೆರೆ: ಕಾಶ್ಮೀರದ ರಜೌರಿಯಲ್ಲಿ ಉಗ್ರರ ಎನ್ ಕೌಂಟರ್ ನಲ್ಲಿ ಪ್ರಾಣ ಕಳೆದುಕೊಂಡ ವೀರಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ರವರ ಸ್ಮಾರಕ ಉದ್ಘಾಟನೆ ಕಾರ್ಕಳದಲ್ಲಿ ನಡೆದ ಬೆನ್ನಲ್ಲೇ ಪ್ರಾಂಜಲ್ ರವರ ತಂದೆ ವೆಂಕಟೇಶ್ ಹಾಗೂ ತಾಯಿ ಅನುರಾಧ ಗುರುವಾಯನಕೆರೆಯ ವೀರಯೋಧ ಏಕನಾಥ್ ಶೆಟ್ಟಿಯವರ ಮನೆಗೆ ಇತ್ತೀಚೆಗೆ ಆಗಮಿಸಿ, ಕುಟುಂಬ ವರ್ಗದವರನ್ನು ಭೇಟಿಯಾದರು.

ಏಕನಾಥ್ ಶೆಟ್ಟಿಯವರ ಪತ್ನಿ ಜಯಂತಿ ಶೆಟ್ಟಿ, ಮಗಳು ಆಶಿತಾ ಶೆಟ್ಟಿಯವರನ್ನು ಭೇಟಿಯಾಗಿ ಪ್ರೀತಿಯಿಂದ ಮಾತನಾಡಿದರು.

ಗುರುವಾಯನಕೆರೆಯ ನಮ್ಮ ಮನೆ ಸಭಾಂಗಣದ ಎದುರಿರುವ ಏಕನಾಥ್ ಶೆಟ್ಟಿಯವರ ಮನೆಯ ಆವರಣದಲ್ಲಿರುವ ವೀರಯೋಧನ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸೇನಾ ಗೌರವ ಸಲ್ಲಿಸಿದರು.ಅಲ್ಲದೇ, ಸೇನೆಯ ಬಗ್ಗೆ, ವೀರಯೋಧರ ಬಗ್ಗೆ ಕೆಲಕಾಲ ಚರ್ಚಿಸಿ, ಏಕನಾಥ್ ಶೆಟ್ಟಿಯವರ ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದರು.

LEAVE A REPLY

Please enter your comment!
Please enter your name here