ಗೋಳಿಯಂಗಡಿ ಸ್ಫೋಟ ಪ್ರಕರಣ-ಮನೆ ಮೇಲ್ಛಾವಣಿ ಬಿದ್ದು ಸಂಕಷ್ಟದಲ್ಲಿದ್ದ ವೃದ್ಧ ದಂಪತಿಗೆ ಶಾಸಕ ಪೂಂಜ‌ ನೆರವು

0

ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಸಮೀಪ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಫೋಟದಿಂದ ಮನೆಯ ಮೇಲ್ಛಾವಣಿ ಕುಸಿದು, ರಾತ್ರಿ ಕೊರೆಯುವ ಚಳಿಯಲ್ಲಿ, ಹಗಲು ಬಿಸಿಲಬೇಗೆಯಲ್ಲಿ ಬಳಲಿದ್ದ ವೃದ್ಧ ದಂಪತಿ ವೆಂಕಪ್ಪ ಮತ್ತು ಕಮಲರವರಿಗೆ ಶಾಸಕ ಹರೀಶ್ ಪೂಂಜ ಆಸರೆಯಾಗಿದ್ದಾರೆ.

ಈ ವೃದ್ಧ ದಂಪತಿಗೆ ನೆರವಾಗುವ ನಿಟ್ಟಿನಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಯುವಕರಿಗೆ ಶಾಸಕರು ಸೂಚನೆ‌ ನೀಡಿದ ಹಿನ್ನಲೆಯಲ್ಲಿ ಮನೆಯ ಮೇಲ್ಛಾವಣಿ ದುರಸ್ಥಿಗೊಳಿಸಲಾಗಿದೆ.‌

ಕಳೆದೆರಡು ದಿನಗಳಿಂದ ಚಳಿಯ ಜೊತೆ ಆತಂಕದಲ್ಲಿದ್ದ ವೃದ್ಧ ದಂಪತಿ ಮೇಲ್ಛಾವಣಿ ಅಳವಡಿಕೆ‌ ನಂತರ ನಿಟ್ಟುಸಿರುಬಿಟ್ಟಿದ್ದಾರೆ.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ್ ಕೆ ವಿ, ಹಿಂದುಳಿದ ವರ್ಗಗಳ ಮೋರ್ಚಾ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ದಿನಕರ ಕುಲಾಲ್, ಹಿಂದು ಜಾಗರಣ ವೇದಿಕೆಯ ನಿರಂಜನ್ ಗೊಳಿಯಂಗಡಿ, ಜಯಪ್ರಸಾದ್, ವಿಪುಲ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಧನಂಜಯ್ ಕುಲಾಲ್, ಗೋಪಾಲ ಶೆಟ್ಟಿ, ಪಕ್ಷದ ಸದಸ್ಯರುಗಳಾದ ಪ್ರವೀಣ್ ಕುಲಾಲ್, ಹೊನ್ನಯ್ಯ ಕುಲಾಲ್, ಪುರೋಶೋತ್ತಮ ಗೌಡ, ಅಚ್ಚುತ್ ಆಚಾರ್ಯ ಮುಂತಾದವರು ಕೆಲಸದಲ್ಲಿ ತಮ್ಮನ್ಮು ತಾವು ತೊಡಗಿಸಿಕೊಂಡರು.

LEAVE A REPLY

Please enter your comment!
Please enter your name here