ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ, ರತ್ನಗಿರಿ- ಸಾರ್ವಜನಿಕ ಪೂರ್ವಭಾವಿ ಸಭೆ

0

ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ, ರತ್ನಗಿರಿಯಲ್ಲಿ ಫೇಬ್ರವರಿ 27,28,29 ಮತ್ತು ಮಾರ್ಚ್ 1, 2 ರಂದು ಜರಗಲಿರುವ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಮಹೋತ್ಸವ ಕುರಿತು ಸಾರ್ವಜನಿಕ ಪೂರ್ವಭಾವಿ ಸಭೆ ಕರೆಯಲಾಯಿತು ಹಾಗೂ ಈ ಸಂದರ್ಭದಲ್ಲಿ ಮಹೋತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷರಾದ ಶ್ರೀ ಸಂಪತ್. ಬಿ. ಸುವರ್ಣ ರವರು ಮಾತನಾಡುತ ವಿವಿಧ ಸಮಿತಿಯ ಸಂಚಾಲಕರುಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿದಲ್ಲಿ ಈ ಪ್ರತಿಷ್ಠಾ ಮಹೋತ್ಸವನ್ನು ಯಶಸ್ವಿ ಕಾಣಲು ಅಭಿಪ್ರಾಯಪಟ್ಟರು.

ಸಮಿತಿಯ ಕಾರ್ಯಧ್ಯಕ್ಷರಾದ ವಿಶ್ವೇಶ್ ಕಿಣಿಯವರು ವಿವಿಧ ಸಮಿತಿಯ ಸಂಚಾಲಕರ ಜವಾಬ್ದಾರಿಯನ್ನು ವಿವರಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಸಂತ ಗೌಡ, ವೆಂಕಟರಮಣ ಆಚಾರ್ಯ, ಅಜಿತ್ ಮೋಹನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾಮತ್, ಜೊತೆ ಕಾರ್ಯದರ್ಶಿ ಶರಣ್ ಕುಲಾಲ್ ಶಿವಾಜಿನಗರ, ಗೌರವ ಸಲಹೆಗಾರ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here