ಪುಂಜಾಲಕಟ್ಟೆಯಲ್ಲಿ ಕಲಾವಿದ ಚಿತ್ರಿತ ರಾಮಮಂದಿರಕ್ಕೆ ಅಪಾರ ಮೆಚ್ಚುಗೆ

0

ಪುಂಜಾಲಕಟ್ಟೆ ಆಯೋಧ್ಯೆಯ ರಾಮ ನಿರ್ಮಾಣದ ನಾಳೆ ನಡೆಯುವ ಪ್ರಾಣಪ್ರತಿಷ್ಠೆಯ ಅಂಗವಾಗಿ ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನ ದಲ್ಲಿ ಸುಮಾರು17.40 ಪೀಟ್ ಬೃಹದ್ದಾಕಾರದ ಕೈಯಲ್ಲಿ ಬಿಡಿಸಿದ ಶ್ರೀರಾಮ ಮಂದಿರದ ವರ್ಣ ರಂಜಿತ ಕಟ್ಟೌಟ್ ನಿರ್ಮಾಣಗೊಂಡಿದೆ.

ಇಂದು ಬೆಳಿಗ್ಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಏಕಾಹ ಭಜನೆಯೊಂದಿಗೆ ದೇವರಿಗೆ ವಿಶೇಷ ಪೂಜೆ ಮತ್ತು ಶ್ರೀರಾಮೋತ್ಸವ ಹಾಗೂ ಶ್ರೀ ರಾಮಚಂದ್ರ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ.ಗೋಪಾಲಕೃಷ್ಣ ದೇವರ ಟ್ರಸ್ಟ್ ನ ಆಡಳಿತ ಮೊಕ್ತೆಸರರಾದ ರವೀಂದ್ರ ಬಾಳಿಗ ಪುಂಜಾಲಕಟ್ಟೆ ಹಾಗೂ ಸಮಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಬಳ್ಳಮಂಜ ನೆತ್ತರ ಪ್ರವೀಣ್ ಆಚಾರ್ಯ ಇವರು ಕೈಯಲ್ಲಿ ಬಿಡಿಸಿದ ಶ್ರೀ ರಾಮನ ಮಂದಿರ ಕಂಗೊಳಿಸುತ್ತಿದೆ.

LEAVE A REPLY

Please enter your comment!
Please enter your name here