ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಹಿಳೆ ಬಂಧನ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರ ಅವಹೇಳನಕಾರಿ, ಸಮುದಾಯದ ನಡುವೆ ಕಲಹ ಉಂಟು ಮಾಡುವ, ಶಾಂತಿ ಕದಡುವ ಸಂದೇಶ ರವಾನೆ ಮಾಡುತ್ತಿದ್ದ ಆರೋಪಿ ಅನಿತಾ ಕಾಸರಗೋಡು ಅಲಿಯಾಸ್ ರಾಧಿಕಾ ಕಾಸರಗೋಡು ಎಂಬಾಕೆಯನ್ನು ಮೂಡಬಿದಿರೆಯ ಪೋಲೀಸರು ಬಂಧಿಸಿದ್ದಾರೆ.

ಜಿತೇಂದ್ರ ಜೈನ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಅನಿತಾ ಕಾಸರಗೋಡು ಅಲಿಯಾಸ್ ರಾಧಿಕಾ ಕಾಸರಗೋಡು ಹಾಗೂ ಅಂಬಿಕಾ ಪ್ರಭು, ಸಮರ್ ಆಳ್ವಾ ವಿರುದ್ಧ ಪ್ರಕರಣ ದಾಖಲಾಗಿತ್ತು.ಆದರೆ ಈ ಕುರಿತು ಯಾವುದೇ ಕ್ರಮ ಆಗಿಲ್ಲದ ಕಾರಣ ಬೆಂಗಳೂರಿನ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು. ಶುಕ್ರವಾರ ಹೈಕೋರ್ಟ್ ಗೆ ಸಿದ್ದಪ್ಪ ನರವೂರ ಎಂಬ ಪೋಲೀಸ್ ಅಧಿಕಾರಿ ಹಾಜರಾಗಿ, ಆರೋಪಿ ಅನಿತಾ ಕಾಸರಗೋಡು ಅಲಿಯಾಸ್ ರಾಧಿಕಾ ಕಾಸರಗೋಡು ಈಗಾಗಲೇ ಬಂಧಿಸಿದ್ದು, ಇನ್ನುಳಿದ ಆರೋಪಿಗಳಾದ ಅಂಬಿಕಾ ಪ್ರಭು, ಸಮರ್ ಆಳ್ವಾ ಅವರಿಗೆ ಶೋಧ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here