ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳ್ತಂಗಡಿ- ಅರಸಿನಮಕ್ಕಿ ವಲಯದ ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರ

0

ಪೆರ್ಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳ್ತಂಗಡಿ ಅರಸಿನಮಕ್ಕಿ ವಲಯದ ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ರವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿನೂತನ ಪದಾಧಿಕಾರಿಗೆ ಶುಭ ಹಾರೈಸಿದರು.

ಶಿಬಾಜೆ ಶಾಲೆಯ ಅಧ್ಯಾಪಕರಾದ ಭೀಮ ನಾಯ್ಕ್ ರವರು ನಾಯಕತ್ವದ ಬಗ್ಗೆ ಸವಿವರವಾದ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.ನಂತರ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ತರಬೇತಿಗೆ ಆಗಮಿಸಿ ಯೊಜನೆ ಬೆಳೆದು ಬಂದ ಹಾದಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ನಂತರ ಒಕ್ಕೂಟ ಸಭೆ ನಡೆಸುವುದನ್ನು ಪ್ರಾತ್ಯಕ್ಷಿತೇ ಮೂಲಕ ಒಕ್ಕೂಟದ ಪದಾಧಿಕಾರಿಗಳು ಮಾಡಿ ತೋರಿಸುವುದರ ಮೂಲಕ ಒಕ್ಕೂಟ ಸಭೆ ನಡೆಸುವುದರ ಬಗ್ಗೆ ತಿಳಿಸಿದರೂ, ಜಿಲ್ಲಾ ಆಂತರಿಕ ಲೆಕ್ಕಪರಿಶೋಧನ ಪ್ರಬಂಧಕರಾದ ಸುಬ್ರಾಯ ನಾಯ್ಕ್ ರವರು ವಾರದ ಸಭೆಯ ನಡೆಸುವುದರ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ವಲಯ ಮೇಲ್ವಿಚಾರಕರಾದ ಶಶಿಕಲಾ, ಸ್ವಾಗತವನ್ನು ಪೆರ್ಲ ಒಕ್ಕೂಟದ ಸೇವಾ ಪ್ರತಿನಿಧಿಯಾದ ಅರುಣ, ಧನ್ಯವಾದವನ್ನು ಶಿಬಾಜೆ ಒಕ್ಕೂಟದ ಸೇವಾ ಪ್ರತಿನಿಧಿ ಯೋಗೀಶರವರು ನೆರವೇರಿಸಿದರು.

LEAVE A REPLY

Please enter your comment!
Please enter your name here