ರಾಜ್ಯಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್ -7: ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳ್ತಂಗಡಿ: ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ ಇದೇ ಬರುವ ಫೆ.3 ಮತ್ತು 4 ರಂದು ಕಾರ್ಕಳದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಮಾರ್ಗದರ್ಶನ ನೀಡಿ, ಶುಭ ಹಾರೈಸಿದರು.

ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ನಿರ್ದೇಶಕರಾದ ವೀರ್ ಯುವರಾಜ್ ಬಲಿಪ, ವೀರ್ ಸೋಮಶೇಖರ್ ಶೆಟ್ಟಿ, ವೀರ್ ಪ್ರಮೋದ್ ಕುಮಾರ್, ವೀರ್ ಶ್ರೀವರ್ಮ ಅಜ್ರಿ, ಜೊತೆ ಕಾರ್ಯದರ್ಶಿಗಳಾದ ವೀರಾಂಗನ ಶ್ವೇತ ಜೈನ್, ವೀರಾಂಗನ ಶಶಿಕಲಾ ಕೆ ಹೆಗ್ಡೆ ಕಾರ್ಕಳ ಜೈನ್ ಮಿಲನ್ ಅಧ್ಯಕ್ಷರಾದ ಮಾಲತಿ ವಸಂತ್ ರಾಜ್ ಹಾಗೂ ಕಾರ್ಕಳದ ಭಜನಾ ಸಂಯೋಜಕರಾದ ಯೋಗರಾಜ್ ಶಾಸ್ತ್ರಿ ಹಾಜರಿದ್ದರು.

LEAVE A REPLY

Please enter your comment!
Please enter your name here