ಉಜಿರೆ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಕೊಲ್ಲಾಜೆ, ಉಪಾಧ್ಯಕ್ಷರಾಗಿ ಸೀತಾರಾಮ.ವಿ

0

ಉಜಿರೆ: ಉಜಿರೆ ಮೂರ್ತೆದಾರರ ಸೇವಾ ಸಹಕಾರ ಸಂಘ ಕಕ್ಕೇನ ಲಾಯಿಲ ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ಎಲ್ಲಾ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ಕೊಲ್ಲಾಜೆ, ಉಪಾಧ್ಯಕ್ಷರಾಗಿ ಸೀತಾರಾಮ ವಿ.ತೋಟತ್ತಾಡಿ ಆಯ್ಕೆಯಾದರು.

ನಿರ್ದೇಶಕರುಗಳಾಗಿ ನೋಣಯ್ಯ ಪೂಜಾರಿ ಕುಕ್ಕಾವು, ಸೇಸಪ್ಪ ಪೂಜಾರಿ ಉಪ್ಪಾರು ಬೆಳಾಲು, ಕೆ.ಎ.ನವೀನ್ಚಂದ್ರ ಉಜಿರೆ, ಹರೀಶ್ ಸುವರ್ಣ ಕನ್ಯಾಡಿ, ಸೂರಪ್ಪ ಪೂಜಾರಿ ಬೆಳಾಲು, ತುಕಾರಾಮ ಸಾಲಿಯಾನ್ ಆರ್ಲ ಕನ್ಯಾಡಿ, ವಸಂತ ಎಂ.ಉಜಿರೆ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ಪ್ರಕ್ರಿಯೆ ನಡೆಸಿದರು.ವ್ಯವಸ್ಥಾಪಕ ಪ್ರಮೋದ್ ಕುಮಾರ್, ಸಿಬ್ಬಂದಿ ಪುರುಷೋತ್ತಮ ಕೋಟ್ಯಾನ್ ಸಹಕರಿಸಿದರು.

LEAVE A REPLY

Please enter your comment!
Please enter your name here