ಕಾರ್ಯತಡ್ಕ ಸ.ಪ್ರೌ.ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

0

ಕಾರ್ಯತಡ್ಕ: ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಸರಕಾರಿ ಪ್ರೌಢ ಶಾಲೆ ಕಾರ್ಯತಡ್ಕದಲ್ಲಿ ಜ.12ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಆಚರಿಸಲಾಯಿತು.

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಬಳಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಜೆಸಿಐ ನ ಅಧ್ಯಕ್ಷ ಹೆಚ್.ಜಿ.ಎಫ್ ಸಂತೋಷ್ ಜೈನ್, ಸಂಪನ್ಮೂಲ ವ್ಯಕ್ತಿ ವಿನಾಯಕ ಜೋಷಿ, ನಿಕಟ ಪೂರ್ವ ಅಧ್ಯಕ್ಷ ಜೆಸಿಐ ಜಿತೇಶ್ ಪಿರೇರಾ, ಯೋಜನಾ ನಿರ್ದೇಶಕ ಜೆ.ಎಫ್.ಎಮ್ ಶ್ರೀಧರ್ ರಾವ್, ಜೂನಿಯರ್ ಜೆಸಿ ಅಧ್ಯಕ್ಷ ಜೆಸಿ ಹರ್ಷಿತ್ ಗೌಡ, ಕಾರ್ಯದರ್ಶಿ ಜೆಸಿ ಅಕ್ಷತ್ ರೈ ಉಪಸ್ಥಿತರಿದ್ದರು.

ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲೆಯ ಕನ್ನಡ ಪಂಡಿತ ವಿನಾಯಕ ಜೋಶಿಯವರು ಸ್ವಾಮಿ ವಿವೇಕಾನಂದರ ಆದರ್ಶಗಳ ಬಗ್ಗೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಮತ್ತು ಶಾಲಾ ಮಕ್ಕಳು ಹಾಗೂ ಜೆಸಿ ಹೆಚ್.ಜಿ.ಎಫ್ ಜೋಸೆಫ್ ಪಿರೇರಾ, ಜೆಸಿ ಹೆಚ್.ಜಿ.ಎಫ್ ಜೇಸಿಂತಾ ಡಿ’ಸೋಜ, ಜೆಸಿ ರಾಜರಾಮ.ಟಿ ಇವರು ಉಪಸ್ಥಿತರಿದ್ದರು.

ಜೆಸಿ ಸಂತೋಷ್ ಜೈನ್ ಕಾರ್ಯಕ್ರಮ ಸ್ವಾಗತಿಸಿ, ಜೆಸಿ ಶ್ರೀಧರ ರಾವ್, ಜೇಸಿ ವಾಣಿ ವರದಿ ವಾಚಿಸಿದರು.ಜೆಸಿ ಅಕ್ಷತ್ ರೈ ವಂದಿಸಿದರು.

LEAVE A REPLY

Please enter your comment!
Please enter your name here